ಮೈಸೂರು,ಮಾ.29(ಪಿಎಂ)- ಬೆಂಗ ಳೂರಿನ ರಂಗರತ್ನಾಕರ ವೃತ್ತಿರಂಗಭೂಮಿ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ 16 ರಂಗಸಾಧಕರಿಗೆ ರಂಗನಮನ, ರಂಗ ಗೀತೆಗಳ ಗಾಯನ, ರಂಗದೃಶ್ಯಗಳು ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮ ಗಳ ಉದ್ಘಾಟನೆಯನ್ನು ಮೈಸೂರು ವಿವಿ ಪ್ರಸಾರಾಂಗದ ನಿವೃತ್ತ ನಿರ್ದೇಶಕ ಕೆ.ಟಿ.ವೀರಪ್ಪ ನೆರವೇರಿಸಿದರು. ಮೈಸೂರಿನ ಕಲಾಮಂದಿರ ಆವ ರಣದ ಕಿರು ರಂಗಮಂದಿರದಲ್ಲಿ, ಗತಿಸಿದ ರಂಗಭೂಮಿ ಕಲಾವಿದರ ಸ್ಮರಣೆ ಯೊಂದಿಗೆ ರಂಗಭೂಮಿಗೆ ಸಂಬಂಧಿ ಸಿದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಕೆ.ಟಿ.ವೀರಪ್ಪ, ಗತಿಸಿದ ರಂಗಭೂಮಿ ಕಲಾವಿದರ ಸೇವೆ ಹಾಗೂ ಅಭಿರುಚಿ…
ಸಿಗ್ಮಾ ಆಸ್ಪತ್ರೆಯಲ್ಲಿ ಉಚಿತ ಕಿಡ್ನಿ ಆರೋಗ್ಯ ತಪಾಸಣಾ ಶಿಬಿರ
March 30, 2021ಮೈಸೂರು, ಮಾ.29- ವಿಶ್ವ ಕಿಡ್ನಿ ದಿನದ ಅಂಗವಾಗಿ ಮೈಸೂರಿನ ಸಿಗ್ಮಾ ಆಸ್ಪತ್ರೆಯಲ್ಲಿ ಉಚಿತ ಕಿಡ್ನಿ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಮೂತ್ರಪಿಂಡ ಕಸಿಮಾಡಿಸಿಕೊಂಡ ನಾರಾಯಣ ಮತ್ತು ಮೂತ್ರಪಿಂಡ ದಾನಿ ಶ್ರೀಮತಿ ಲಕ್ಷ್ಮಿ, ದೀಪ ಬೆಳಗುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಈ ವೇಳೆ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿಮಾಡಿಕೊಂಡ ರೋಗಿಗಳು, ಮೂತ್ರಪಿಂಡ ದಾನಿಗಳು ಮತ್ತು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಉಪ ಸ್ಥಿತರಿದ್ದರು. ಈ ಸಂದರ್ಭದಲ್ಲಿ ಮೂತ್ರಪಿಂಡ ದಾನಿಗಳನ್ನು ಸನ್ಮಾನಿಸಲಾಯಿತು. ಸಿಗ್ಮಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಜ್ಞಾನಶಂಕರ್ ಮಾತನಾಡಿ, ದಾನಗಳಲ್ಲಿ…
ಮೈಸೂರಲ್ಲಿ ಉದ್ಯಮಿಗಳಿಗೆ ಅಲ್ಪಮಟ್ಟಿನ ರಿಲೀಫ್: ‘ಸೂಪರ್ ಕಮರ್ಷಿಯಲ್ ತೆರಿಗೆ’ ಈಗ ‘ಕಮರ್ಷಿಯಲ್-ಬಿ’ಆಗಿ ಮಾರ್ಪಾಡು
March 30, 2021ಮೈಸೂರು, ಮಾ.29(ಎಂಕೆ)- ಮೈಸೂ ರಿನ ಹೋಟೆಲ್, ಲಾಡ್ಜ್, ಚಿತ್ರಮಂದಿರ, ಕಲ್ಯಾಣಮಂಟಪ ಹಾಗೂ ಶಾಪಿಂಗ್ ಮಾಲ್ಗಳ ಮೇಲೆ ವಿಧಿಸುತ್ತಿದ್ದ ‘ಸೂಪರ್ ಕಮರ್ಷಿಯಲ್ ತೆರಿಗೆ’ಯನ್ನು ತೆಗೆದು ‘ಕಮ ರ್ಷಿಯಲ್-ಬಿ’ ಎಂಬುದಾಗಿ ಮಾರ್ಪಾಡು ಮಾಡಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಕಂದಾಯ ಆಯುಕ್ತ ಡಾ.ನಾಗರಾಜ್ ತಿಳಿಸಿದರು. ಮೈಸೂರಿನ ವಿಶ್ವೇಶ್ವರನಗರದಲ್ಲಿರುವ ಸಿಂಧೂರ ಕಲ್ಯಾಣ ಮಂಟಪದಲ್ಲಿ ಹೋಟೆಲ್, ಲಾಡ್ಜ್, ಚಿತ್ರಮಂದಿರ, ಕಲ್ಯಾಣಮಂಟಪ, ಶಾಪಿಂಗ್ ಮಾಲ್ಗಳ ಮಾಲೀಕರು ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ನಡೆದ ಸಭೆ ಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯ ದಲ್ಲಿ ಮೈಸೂರು ಹೊರತು…
ಸಿಡಿ ಪ್ರಕರಣ: ರಾಜ್ಯದ ಜನರ ಗಮನ ಬೇರೆಡೆ ಸೆಳೆಯಲು ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಆರೋಪ
March 30, 2021ಮೈಸೂರು,ಮಾ.29(ಎಂಟಿವೈ)- ಅಶ್ಲೀಲ ಸಿಡಿ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜನರ ಗಮನ ಬೇರೆಡೆ ಸೆಳೆಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆರೋ ಪಿಸಿ ಹಾಗೂ ಅತ್ಯಾಚಾರ ಪ್ರಕರಣ ದಾಖ ಲಿಸಿ ಬಂಧಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೈಸೂರಿನ ಕಾಂಗ್ರೆಸ್ ಕಚೇರಿ ಮುಂಭಾಗ ದಲ್ಲಿ ಸೋಮವಾರ ಮಧ್ಯಾಹ್ನ ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗ, ಮೈಸೂರು ನಗರ ಹಾಗೂ ಗ್ರಾಮಾಂ ತರ ಕಾಂಗ್ರೆಸ್ ಘಟಕÀದ ವತಿಯಿಂದ ನಡೆದ…
ಮನೆ, ಅಂಗಡಿ-ಮುಂಗಟ್ಟು ಗೋಡೆಗೆ ಕ್ಯೂಆರ್ ಕೋಡ್ ಸ್ಟಿಕ್ಕರ್
March 30, 2021ಮೈಸೂರು,ಮಾ.29(ಪಿಎಂ)-ಸ್ವಚ್ಛ ಸರ್ವೇ ಕ್ಷಣೆ 2021ರಲ್ಲಿ ಟಾಪ್ 3ರಲ್ಲಿ ಒಂದು ಸ್ಥಾನ ಪಡೆಯಲೇಬೇಕೆಂಬ ಮಹತ್ವಾಕಾಂಕ್ಷೆ ಯೊಂದಿಗೆ ಕಾರ್ಯಪ್ರವೃತ್ತವಾಗಿರುವ ಮೈಸೂರು ಮಹಾನಗರ ಪಾಲಿಕೆ, ಇದಕ್ಕಾಗಿ ನಾಗರಿಕರ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯಲು ವಿಶಿಷ್ಟ ಕಾರ್ಯಕ್ರಮ ಕೈಗೆತ್ತಿಕೊಂಡಿದೆ. ಮೈಸೂರು ನಗರ ವ್ಯಾಪ್ತಿಯ ಮನೆಗಳ ಹಾಗೂ ಅಂಗಡಿ-ಮುಂಗಟ್ಟುಗಳ ಗೋಡೆಗೆ `ಸಿಟಿಜ್ಹನ್ ಫೀಡ್ಬ್ಯಾಕ್’ ಲಿಂಕ್ ತೆರೆದು ಕೊಳ್ಳುವ ಕ್ಯೂಆರ್ ಕೋಡ್ ಇರುವ ಸ್ಟಿಕ್ಕರ್ಗಳನ್ನು ಅಂಟಿಸುವ ಕೊನೆ ಪ್ರಯ ತ್ನಕ್ಕೆ ಪಾಲಿಕೆ ಕೈ ಹಾಕಿದೆ. ನಾಗರಿಕರ ಪ್ರತಿ ಕ್ರಿಯೆ ನೀಡಲು ಮಾ.31 ಕೊನೆ ದಿನ. ಈ ಹಿನ್ನೆಲೆಯಲ್ಲಿ…
ವಚನ ಸಾಹಿತ್ಯದಿಂದ ಜೀವನ ವಿಶ್ವಾಸ
March 30, 2021ಮೈಸೂರು, ಮಾ.29(ಆರ್ಕೆಬಿ)- ಇಂದಿನ ಸಾಮಾ ಜಿಕ ವ್ಯವಸ್ಥೆಯಲ್ಲಿ ಸಾಮಾಜಿಕ ಬದಲಾವಣೆ ಹಾಗೂ ಬದುಕನ್ನು ಧೈರ್ಯವಾಗಿ ಎದುರಿಸಲು ಶರಣ ಸಾಹಿತ್ಯ ಮತ್ತು ಸಂಸ್ಕøತಿ ಸಹಾಯಕವಾಗುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕಿ ಡಾ.ಸಿ.ಜಿ.ಉಷಾದೇವಿ ತಿಳಿಸಿದರು. ಮೈಸೂರಿನ ಸರಸ್ವತಿಪುರಂ ಜೆಎಸ್ಎಸ್ ಪ್ರಶಿಕ್ಷಣ ಪ್ರಾಥಮಿಕ ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕ ಆಯೋಜಿಸಿದ್ದ ಹರದನ ಹಳ್ಳಿ ಕಂಬಿ ಮಲ್ಲಪ್ಪ ದತ್ತಿ, ಮುದ್ದುಮಾದಪ್ಪ ದತ್ತಿ ಆಯ್ದ ವಚನಗಳ ವಾಚನ, ಗಾಯನ, ವ್ಯಾಖ್ಯಾನ ಮತ್ತು ಚಿತ್ರಪ್ರದ ರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ,…
ಬೇಸಿಗೆ ಹಂಗಾಮು ರೈತರ ಬೆಳೆ ಸಮೀಕ್ಷೆ ಆ್ಯಪ್ ಬಿಡುಗಡೆ
March 30, 2021ಮೈಸೂರು, ಮಾ.29-ಕೃಷಿ ಇಲಾಖೆಯ ವತಿಯಿಂದ 2020-21ನೇ ಸಾಲಿನ ಬೆಳೆ ಸಮೀಕ್ಷೆ ಉತ್ಸವದ ಭಾಗವಾಗಿ ಬೇಸಿಗೆ ಹಂಗಾಮು ರೈತರ ಬೆಳೆ ಸಮೀಕ್ಷೆ ಆ್ಯಪ್ ಬಿಡುಗಡೆ ಮಾಡಲಾಗಿದೆ. ಈ ಆ್ಯಪ್ ಅನ್ನು ಬಳಸಿ ಕೊಂಡು ಸ್ವತಃ ರೈತರೇ ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳ ಸಮೀಕ್ಷೆಯನ್ನು ಮಾಡಿ ವಿವರಗಳನ್ನು ಅಪೆÇ್ಲೀಡ್ ಮಾಡಬಹುದು. ಆ್ಯಪ್ನ ವೈಶಿಷ್ಟ್ಯ ಎಂದರೆ ರೈತರ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಮಾಹಿತಿಯನ್ನು ರೈತರೇ ನಿಖರವಾಗಿ ದಾಖಲಿಸಬಹುದು. ಬೆಳೆ ಸಮೀಕ್ಷೆ ಮಾಹಿತಿ ಯನ್ನು ಬೆಳೆವಿಮೆ, ಬೆಳೆನಷ್ಟ ಪರಿಹಾರ, ಬೆಂಬಲಬೆಲೆ ಮತ್ತು ಸರ್ಕಾರದ…
ಯುವಜನತೆಯಲ್ಲಿ ಭಾವನಾತ್ಮಕ ನಂಟು, ಸಾಮಾಜಿಕ ಮೌಲ್ಯ ಕಡಿಮೆ
March 30, 2021ಮೈಸೂರು,ಮಾ.29(ಎಸ್ಪಿಎನ್)- ಇಂದಿನ ಯುವಜನರಲ್ಲಿ ಬೌದ್ಧಿಕ ಮಟ್ಟ ಹಾಗೂ ಜೀವನಮಟ್ಟ ಹೆಚ್ಚಿನದಾಗಿದ್ದರೂ ಅವರಲ್ಲಿ ಭಾವನಾತ್ಮಕ ನಂಟು, ಸಾಮಾಜಿಕ ಮೌಲ್ಯಗಳು ಕಡಿಮೆಯಾಗುತ್ತಿವೆ ಎಂದು ಲೇಖಕಿ ಲೀಲಾ ಪ್ರಕಾಶ್ ಅಭಿಪ್ರಾಯಪಟ್ಟರು. ಮೈಸೂರಿನ `ಸುರಚಿ’ ರಂಗಮಂದಿರದಲ್ಲಿ ಅಭಿರುಚಿ ಬಳಗ ಹಾಗೂ ಆಸಕ್ತಿ ಪ್ರಕಾಶನ, ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಸ್ಥೆಯ ಜಂಟಿ ಸಹಯೋಗದಲ್ಲಿ ಕವಿಗೋಷ್ಠಿ ಹಾಗೂ ಅನುಭವ ಹಂಚಿಕೆ ಕಾರ್ಯಕ್ರಮದಲ್ಲಿ `ಆರೋಗ್ಯವಂತ ವಿಭಕ್ತ ಕುಟುಂಬ ಹಾಗೂ ಸಮಾಜ’ ವಿಷಯ ಕುರಿತು ಮಾತನಾಡಿದರು. ಪೂರ್ವಜರಲ್ಲಿ ಬೌದ್ಧಿಕ ಮಟ್ಟ ಮತ್ತು ಜೀವನಶೈಲಿ ಕಡಿಮೆಯದಾಗಿದ್ದರೂ, ಭಾವನಾತ್ಮಕ…
56 ಹೊಸ ಸ್ಟೋರ್ಸ್ ಆರಂಭದ ಘೋಷಣೆ
March 30, 2021ಮೈಸೂರು,ಮಾ.29(ಆರ್ಕೆಬಿ)- ಪ್ರತಿಷ್ಠಿತ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ 2021-22ನೇ ಸಾಲಿನಲ್ಲಿ ದೇಶದ 40 ಸೇರಿದಂತೆ ವಿಶ್ವಾದ್ಯಂತ ಒಟ್ಟು 56 ಹೊಸ ಸ್ಟೋರ್ಸ್ ಆರಂಭಿಸುವುದಾಗಿ ಘೋಷಣೆ ಮಾಡಿದೆ. ಈ ಮೂಲಕ ದೇಶದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿಕೊಳ್ಳಲಿದೆ. ತಮಿಳು ನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಒಡಿಶಾ ಮತ್ತು ಕೇರಳ ರಾಜ್ಯದಲ್ಲಿ ಹೊಸ ಸ್ಟೋರ್ಗಳನ್ನು ಆರಂಭಿಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಂಗಾಪುರ, ಮಲೇಷ್ಯಾ, ಒಮನ್, ಕತಾರ್, ಬಹರೇನ್, ಯುಎಇಗಳಲ್ಲಿಯೂ ಹೊಸ ಸ್ಟೋರ್ ಗಳನ್ನು…
ತಾಯಿಯೊಂದಿಗಿದ್ದ ಮತ್ತೊಂದು ಹುಲಿ ಮರಿ ಕಳೇಬರ ಪತ್ತೆ
March 30, 2021ಮೈಸೂರು,ಮಾ.29(ಎಂಟಿವೈ)- ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪವಿಭಾಗದ ನುಗು ವಲಯದಲ್ಲಿ ತಾಯಿಯಿಂದ ಬೇರ್ಪಟ್ಟ ಮತ್ತೊಂದು ಹುಲಿ ಮರಿಯ ಕಳೇ ಬರ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ. ಇದರಿಂದ ಮೃತಪಟ್ಟ ಹುಲಿಮರಿಗಳ ಸಂಖ್ಯೆ 3ಕ್ಕೆ ಏರಿದಂತಾಗಿದ್ದು, ಮೈಸೂರು ಮೃಗಾಲಯ ದಲ್ಲಿ ಚಿಕಿತ್ಸೆ ನೀಡುತ್ತಿರುವ ಒಂದು ಹುಲಿ ಮರಿ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಬಂಡೀಪುರ ಅರಣ್ಯದ ನುಗು ವಲಯದಲ್ಲಿ ಭಾನುವಾರ ಮಧ್ಯಾಹ್ನ ನಿತ್ರಾಣಗೊಂಡ ಸ್ಥಿತಿಯಲ್ಲಿ ಮೂರು ಹುಲಿ ಮರಿಗಳು ಗಸ್ತು ನಡೆಸುತ್ತಿದ್ದ ಸಿಬ್ಬಂದಿ ಕಣ್ಣಿಗೆ ಬಿದ್ದಿದ್ದವು. ಅದರಲ್ಲಿ ಚಿಂತಾಜನಕ…










