ನವದೆಹಲಿ,ಡಿ.20-ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖ ಲಾಗಿದ್ದಾರೆ. ರೆಟಿನಾ ಹಿಂಭಾಗದಲ್ಲಿ ಸೋಂಕು ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾಗಿರು ವುದಾಗಿ ಹೇಳಲಾಗಿದೆ. ಪ್ರಜ್ಞಾ ಸಿಂಗ್ ಕೆಲ ತಿಂಗಳಿಂದ ಏಮ್ಸ್ ಆಸ್ಪತ್ರೆಯಲ್ಲಿ ರೆಟಿನಾ ಸಂಬಂಧಿತ ಚಿಕಿತ್ಸೆ ಪಡೆಯುತ್ತಿ ದ್ದಾರೆ. 2 ದಿನಗಳ ಹಿಂದೆ ಅದಕ್ಕೆಂದೇ ಏಮ್ಸ್ಗೆ ತೆರಳಿದ್ದರು. ಆದರೆ ಆ ಸಮಯ ದಲ್ಲಿ ತಪಾಸಣೆ ನಡೆಸಿದ ವೈದ್ಯರು, ಆಸ್ಪ ತ್ರೆಗೆ ದಾಖಲಾಗಲು ಸೂಚಿಸಿದ್ದಾರೆ. ಪ್ರಜ್ಞಾ ಅವರ ಕೊರೊನಾ ಪರೀಕ್ಷೆ ವರದಿ ನೆಗೆ ಟಿವ್ ಬಂದಿದೆ….
ಲಾಲು ಪ್ರಸಾದ್ ಆರೋಗ್ಯ ಕ್ಷೀಣ
December 21, 2020ಪಾಟ್ನಾ,ಡಿ.20-ಆರ್ಜೆಡಿ ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯ ಮತ್ತಷ್ಟು ಕ್ಷೀಣವಾಗಿದ್ದು, ಅವರ ಕಿಡ್ನಿಯ ಶೇ.25 ರಷ್ಟು ಭಾಗ ಮಾತ್ರ ಕಾರ್ಯ ನಿರ್ವ ಹಿಸುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಸ್ವತಃ ಲಾಲು ಪ್ರಸಾದ್ ಅವರ ಪುತ್ರ ತೇಜಸ್ವಿ ಯಾದವ್ ಮಾಹಿತಿ ನೀಡಿದ್ದು, ಬಿಹಾರದ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. `ಲಾಲು ಪ್ರಸಾದ್ ಯಾದವ್ ಅವರ ಕಿಡ್ನಿಗಳು ಶೇ.25ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಅವರು ರಾಜೇಂದ್ರ…
ಮಗನಿಗೆ ತಾಯಿ ಪ್ರೀತಿ ಸಿಗದಿದ್ದಾಗ ಆದಂತೆ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಸೋಲು ನೋವುಂಟು ಮಾಡಿದೆ
December 21, 2020ಮೈಸೂರು, ಡಿ.20(ಎಂಟಿವೈ)- ರಾಜಕೀಯ ಪುನರ್ಜನ್ಮ ನೀಡಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದ ರಾಮಯ್ಯ ಅವರಿಗೆ ಆದ ಸೋಲು, ತಾಯಿ ಯಿಂದ ಮಗನಿಗೆ ಪ್ರೀತಿ ಸಿಗದೇ ಇದ್ದರೆ ಆಗುವ ನೋವಿನಂತೆ ಭಾಸವಾಗಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಲ್ಲಿ ಪತ್ರಕರ್ತರೊಂದಿಗೆ ಭಾನು ವಾರ ಮಾತನಾಡಿದ ಅವರು, ಚಾಮುಂಡೇ ಶ್ವರಿ ಕ್ಷೇತ್ರದಲ್ಲಿ ಉಂಟಾದ ಸೋಲು ಆಘಾತವನ್ನುಂಟು ಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹೆಚ್ಚು ಪ್ರೀತಿಸಿದ್ದು ಸಿಗಲಿಲ್ಲವೆಂದರೆ ನೋವು ಆಗುವುದು ಸಹಜ. ತಾಯಿ…
ಕಲಾಮಂದಿರದಲ್ಲಿ ಮನಸೂರೆಗೊಂಡ ಜಾನಪದ ಸೊಗಡು
December 21, 2020ಮೈಸೂರು, ಡಿ.20(ಎಂಟಿವೈ)- `ವಿಶ್ವ ಜಾನಪದ ದಿನ’ ಆಚರಣೆ ಅಂಗವಾಗಿ ಮೈಸೂರು ಕಲಾಮಂದಿರ ದಲ್ಲಿ ಭಾನುವಾರ `ಜಾನಪದ ಸುಗ್ಗಿ’ ಕಾರ್ಯಕ್ರಮ ದಲ್ಲಿ ವೈವಿಧ್ಯಮಯ ಜಾನಪದ ಕಲಾ ಪ್ರಕಾರಗಳು ಮೇಳೈಸಿ ನೆರೆದವರ ಮನಸೂರೆಗೊಂಡವು. ಕೋವಿಡ್-19ನಿಂದಾಗಿ ಹಲವು ತಿಂಗಳಿಂದ ಮನ ರಂಜನಾ ಕಾರ್ಯಕ್ರಮವಿಲ್ಲದೇ ಮಂಕಾಗಿದ್ದ ಮನಸು ಗಳಿಗೆ ಕರ್ನಾಟಕ ಜಾನಪದ ಅಕಾಡೆಮಿ ವಾರಾಂ ತ್ಯದ ದಿನವೇ ಜಾನಪದ ವೈವಿಧ್ಯ ಉಣಬಡಿಸಿತು. ಸುದೀರ್ಘ ಅವಧಿ ನಂತರ ಮೈಸೂರಿನಲ್ಲಿ `ಜಾನ ಪದ ಸುಗ್ಗಿ’ ಸಾಂಸ್ಕøತಿಕ ಕಾರ್ಯಕ್ರಮ ಕಲಾ ಪ್ರೇಮಿ ಗಳು, ಕಲಾ ರಸಿಕರಿಗೆ ಮುದ…
ಜಾನಪದ ಉಳಿಸಿ, ಬೆಳೆಸುವುದು ಎಲ್ಲರ ಹೊಣೆ
December 21, 2020ಜಾನಪದ ಸುಗ್ಗಿ ಕಾರ್ಯಕ್ರಮಕ್ಕೆ ಗೈರಾದ ಸಚಿವ ಎಸ್.ಟಿ.ಸೋಮಶೇಖರ್ರಿಂದ ಮುದ್ರಿತ ಸಂದೇಶ ಮೈಸೂರು,ಡಿ.20(ಎಂಟಿವೈ)-ಜನಪದಕ್ಕೆ ಅದರದ್ದೇ ಆದ ವೈಶಿಷ್ಟ್ಯವಿದೆ. ಅದು ನಮ್ಮ ಸಂಸ್ಕøತಿಯನ್ನು ಸಾರಿ ಹೇಳುತ್ತದೆ. ಇದನ್ನು ಉಳಿಸಿ, ಬೆಳೆಸಲು ಎಲ್ಲರೂ ಪಣ ತೊಡಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ. `ವಿಶ್ವ ಜಾನಪದ ದಿನ’ದಂಗವಾಗಿ ಮೈಸೂರಿನ ಕಲಾಮಂದಿರ ದಲ್ಲಿ `ಜಾನಪದ ಸುಗ್ಗಿ’ಗೆ ಗೈರಾದ ಸಚಿವ ಎಸ್.ಟಿ.ಸೋಮಶೇಖರ್ ಸಂದೇಶ ಕಳುಹಿಸಿದ್ದರು. ಜಾನಪದ ಕಲೆ, ಸಂಸ್ಕøತಿ ಉಳಿವಿಗೆ ಸಂಘಟಿತ ಪ್ರಯತ್ನ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಜನಪದ ಸಂಸ್ಕøತಿ…
ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಿಎಂಗೆ ಮನವಿ
December 21, 2020ಮೈಸೂರು, ಡಿ.20(ಎಂಟಿವೈ)-ಕಾಡಂಚಿನ ಗ್ರಾಮಗಳಲ್ಲಿ ಯಾವುದೇ ಮೂಲಭೂತ ಸೌಲಭ್ಯವಿಲ್ಲದೆ ವಾಸಿಸುತ್ತಿರುವ ಆದಿವಾಸಿ ಸಮುದಾಯದ ಸಮಗ್ರ ಏಳಿಗೆಗೆ ಪ್ರತ್ಯೇಕ ಆದಿವಾಸಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವಂತೆ ಅಖಿಲ ಕರ್ನಾಟಕ ಆದಿ ವಾಸಿ ಮಹಿಳಾ ಸಮಿತಿ ಪದಾಧಿಕಾರಿ ಗಳು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಯಡಿ ಯೂರಪ್ಪ ಅವರನ್ನು ಅಖಿಲ ಕರ್ನಾ ಟಕ ಆದಿವಾಸಿ ಮಹಿಳಾ ಸಮಿತಿ ರಾಜ್ಯಾಧ್ಯಕ್ಷೆ ಎನ್.ವಿ.ಮಂಜುಳಾ ನೇತೃತ್ವದಲ್ಲಿ ಆದಿವಾಸಿ ಮುಖಂಡರಾದ ಮುನಿಸ್ವಾಮಿ, ಶಿವಮ್ಮ, ರವಿ, ಕುಮಾರ, ಆಂಜನಪ್ಪ, ಮಂಜು,…
ಬೆಂಬಲ ಬೆಲೆಯಡಿ ರಾಗಿ ಖರೀದಿಗೆ ಸರ್ಕಾರದ ಆದೇಶ
December 21, 2020ಮೈಸೂರು,ಡಿ.20-2020-21ನೇ ಸಾಲಿನ ಮುಂಗಾರು ಋತುವಿನಲ್ಲಿ ಮೈಸೂರು ಜಿಲ್ಲೆಯ ರೈತರು ಬೆಳೆದ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಲು ಸರ್ಕಾರವು ಆದೇಶಿಸಿದೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಕಾರ್ಯಪಡೆಯ ತೀರ್ಮಾನದಂತೆ ಉತ್ತಮ ಗುಣ ಮಟ್ಟದ ರಾಗಿಯನ್ನು ಖರೀದಿಸಲಾಗುವುದು. ಜಿಲ್ಲೆ ಯಲ್ಲಿ 12 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ರೈತÀರು ತಾವು ಬೆಳೆದ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರಗಳ ಮೂಲಕ ಮಾರಾಟ ಮಾಡಲು ರಾಜ್ಯ ಸರ್ಕಾರ ಕೋರಿದೆ. ಮೈಸೂರು ತಾಲೂಕಿನ ಬಂಡಿಪಾಳ್ಯದ ಎಪಿಎಂಸಿ, ನಂಜನಗೂಡಿನ ಎಪಿಎಂಸಿ,…
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಣೆ, ಪ್ರಶಸ್ತಿಯಲ್ಲಿ ವೈದ್ಯಕೀಯ ಸಾಹಿತ್ಯ ಪ್ರಕಾರ ಪರಿಗಣಿಸಲು ಪ್ರಸ್ತಾಪಿಸಲಾಗುವುದು
December 21, 2020ರಂಗಾಯಣದ ನಿರ್ದೇಶಕರೂ ಆದ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಸಿ.ಕಾರ್ಯಪ್ಪ ಮೈಸೂರು, ಡಿ.20(ಪಿಎಂ)- ಕೇಂದ್ರ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಕಟಣೆ ಹಾಗೂ ಪ್ರಶಸ್ತಿಯಲ್ಲಿ ವೈದ್ಯಕೀಯ ಸಾಹಿತ್ಯ ಪರಿ ಗಣಿಸುವಂತೆ ಪ್ರಸ್ತಾಪ ಮಾಡುವುದಾಗಿ ರಂಗಾಯಣದ ನಿರ್ದೇಶಕರೂ ಆದ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು. ಮೈಸೂರಿನ ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಯಮ್ಮ ಪ್ರಕಾಶನ, ಆರೋಗ್ಯ ಯೋಗ ಸಂಸ್ಥೆ ಹಾಗೂ ಸುಯೋಗ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ…
6 ಸಾಧಕಿಯರಿಗೆ `ಕಸ್ತೂರ್ ಬಾ ಗಾಂಧಿ’ ಪ್ರಶಸ್ತಿ ಪ್ರದಾನ
December 21, 2020ಮೈಸೂರು, ಡಿ.20(ವೈಡಿಎಸ್)- ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನ ಹಾಸ್ಟೆಲ್ನಲ್ಲಿ ಶನಿವಾರ ನಡೆದ ಕಾರ್ಯ ಕ್ರಮದಲ್ಲಿ ವಿವಿಧ ಕ್ಷೇತ್ರಗಳ 6 ಮಹಿಳಾ ಸಾಧಕರಿಗೆ `ಕಸ್ತೂರ್ ಬಾ ಗಾಂಧಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಶಿವರಾತ್ರೀಶ್ವರ ಮಹಿಳಾ ಸಮಾಜ ವತಿಯಿಂದ ಶನಿವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುನಂದ ಪಾಲನೇತ್ರ (ಸಾರ್ವಜನಿಕ), ಪಿ.ಬಿ.ಇಂದುಕಲಾ ಅರಸ್(ಶಿಕ್ಷಣ), ಡಾ.ಬಿ.ಎಸ್. ಸೀತಾಲಕ್ಷ್ಮಿ(ವೈದ್ಯಕೀಯ), ಲೀಲಾ ವಾಸುದೇವ್ (ಸಂಶೋಧನೆ), ಶಶಿಕಲಾ ಸುಬ್ಬಣ್ಣ(ಸಮಾಜ ಸೇವೆ), ಸಬಿಕೆ ನೂಬಾಯಾ (ಪರಿಸರ ವಿಜ್ಞಾನ) ಅವರಿಗೆ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ…
ಜನಪದ ಕಲಾಪ್ರಕಾರ ತರಬೇತಿ ಸಮಾರೋಪ
December 21, 2020ಮೈಸೂರು, ಡಿ.20(ಎಸ್ಪಿಎನ್)- ಮೈಸೂರಿನ ಕಲಾಮಂದಿರ ಆವರಣದಲ್ಲಿ ಗೌತಮ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಟ್ರಸ್ಟ್ ವತಿಯಿಂದ ಕನ್ನಡ-ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ `30 ದಿನಗಳ ರಂಗಭೂಮಿ ಮತ್ತು ಜನಪದ ಕಲಾಪ್ರಕಾರ ತರಬೇತಿ ಶಿಬಿರ’ದ ಸಮಾರೋಪ ಸಮಾರಂಭ ಭಾನುವಾರ ನಡೆಯಿತು. ಸಮಾರಂಭ ಉದ್ಘಾಟಿಸಿದ ಜಾನಪದ ಗಾಯಕ ಲಕ್ಷ್ಮಿರಾಮ್, ಜಾನಪದ ಕಲೆ ಮತ್ತು ನೃತ್ಯ ಪ್ರಕಾರ ಉಳಿಸಿ-ಬೆಳಸುವ ದಿಸೆಯಲ್ಲಿ ಗೌತಮ ಟ್ರಸ್ಟ್ ಕಾರ್ಯ ನಿರ್ವಹಿಸುತ್ತಿದೆ. ಜತೆಗೆ ರಂಗಭೂಮಿ ಮತ್ತು ಜಾನಪದ ಕಲೆ ಕಲಿಯುವುದರಿಂದ ವಿದ್ಯಾರ್ಥಿಗಳು ಮತ್ತಷ್ಟು ಕ್ರಿಯಾಶೀಲರಾಗುತ್ತಾರೆ ಎಂದರು. ಇದೇ ವೇಳೆ…










