ಮೈಸೂರು, ಮಾ.21(ಪಿಎಂ)- ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ಮತ್ತು ಮೈಸೂರು ತಾಲೂಕಿನ 39 ಕೆರೆಗಳಿಗೆ ನೀರು ತುಂಬಿಸಲು ಹೆಚ್.ಡಿ.ಕೋಟೆ ತಾಲೂಕಿನ ಇಬ್ಜಾಲ (ಕರಿಗಾಲ) ಗ್ರಾಮದ ಬಳಿ ನಿರ್ಮಿಸುತ್ತಿರುವ ಏತ ನೀರಾವರಿ ಯೋಜನೆ ಯಲ್ಲಿ ಏರು ಕೊಳವೆ ಮಾರ್ಗದ (ಪೈಪ್ಲೈನ್) ಕಾಮಗಾರಿ ಸಂಬಂಧ ಆರ್ಎಫ್ಸಿಟಿಎಲ್ಎಆರ್ಆರ್-2013 ಕಾಯ್ದೆ ಉಲ್ಲಂಘಿಸಿ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ರೈತ, ಕೃಷಿ ಕಾರ್ಮಿಕ ಸಂಘಟನೆ (ಆರ್ಕೆಎಸ್) ಆರೋಪಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಸಮಿತಿ ಸದಸ್ಯ…
ಮೈಸೂರಿನ ವೃದ್ಧಾಶ್ರಮಗಳಿಗೆ ನಿತ್ಯ ಉಚಿತ ಕುಡಿಯುವ ನೀರು
March 22, 2020ಮೈಸೂರು, ಮಾ.21(ಪಿಎಂ)- ಮೈಸೂರಿನ ಯಾದವಗಿರಿ ಕೈಗಾರಿಕಾ ಪ್ರದೇಶ ದಲ್ಲಿರುವ `ಐಡಿಯಲ್ ಆಕ್ವಾ ಶುದ್ಧ ಕುಡಿಯುವ ನೀರು ಘಟಕ’ದಿಂದ ಮೈಸೂರು ನಗರದ ಎಲ್ಲಾ ವೃದ್ಧಾಶ್ರಮಗಳಿಗೆ ಉಚಿತವಾಗಿ ಕುಡಿಯುವ ನೀರು ಪೂರೈಸಲಾಗುವ ಯೋಜನೆ ರೂಪಿಸಲಾಗಿದೆ ಎಂದು ಘಟಕದ ಮಾಲೀಕ ಹಾಗೂ ಚಿತ್ರನಟ ವಿಜಯ್ ಸೂರ್ಯ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಮಾ.22 `ವಿಶ್ವ ಜಲದಿನ’. ನಗರದ ವೃದ್ಧಾಶ್ರಮಗಳಿಗೆ ನಿತ್ಯವೂ ಉಚಿತ ಕುಡಿಯುವ ನೀರು ಪೂರೈಸುವ ಕಾರ್ಯಕ್ಕೆ ಭಾನುವಾರ ಚಾಲನೆ ನೀಡುತ್ತಿದ್ದೇವೆ. ಈಗಾಗಲೇ 4 ವೃದ್ಧಾಶ್ರಮಗಳನ್ನು ಸಂಪರ್ಕಿಸಲಾಗಿದೆ. ನಮ್ಮ ನೀರಿನ ಘಟಕ ಇರುವವರೆಗೂ…
ನಾಳೆ ಹಲವೆಡೆ ವಿದ್ಯುತ್ ನಿಲುಗಡೆ
March 22, 2020ಮೈಸೂರು,ಮಾ.21-ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿ ಯಿಂದ ವಿದ್ಯುತ್ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಮಾರ್ಚ್ 23ರಂದು ಬೆಳಿಗ್ಗೆ 10ರಿಂದ ಸಂಜೆ 5.30 ಗಂಟೆಯವರೆಗೆ 11 ಕೆ.ವಿ ಕಲ್ಯಾಣಗಿರಿ ಫೀಡರ್ ವ್ಯಾಪ್ತಿಯ ಬಿ.ಎನ್.ರಸ್ತೆ, ಅಶೋಕ ರಸ್ತೆ, ಕಬೀರ್ ರಸ್ತೆ, ಲಷ್ಕರ್ ಪೆÇಲೀಸ್ ಸ್ಟೇಷನ್, ಗುಜರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆÉ.
ಇಂದು ಮಾರುಕಟ್ಟೆ ಸೇವೆಗಳು ಸ್ಥಗಿತ
March 22, 2020ಮೈಸೂರು,ಮಾ.21-ಕೊರೊನಾ ವೈರಸ್ ಶಂಕಿತ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪ್ರಧಾನಿ ಮೋದಿ ಅವರ ನಿರ್ದೇಶನದಂತೆ ಮಾ.22ರಂದು ಬೆಳಿಗ್ಗೆ 7ರಿಂದ ರಾತ್ರಿ 9 ಗಂಟೆವರೆಗೆ ಜನತಾ ಕಫ್ರ್ಯೂ ಜಾರಿಯಾಗುವುದರಿಂದ ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಗೊಳ ಪಡುವ ದೇವರಾಜ ಮಾರುಕಟ್ಟೆ, ಮಂಡಿ ಮಾರುಕಟ್ಟೆ, ವಾಣಿವಿಲಾಸ ಮಾರುಕಟ್ಟೆ, ಇನ್ನಿತರೆ ಮಾರುಕಟ್ಟೆಯ ಎಲ್ಲಾ ಮಳಿಗೆಗಳು ತಮ್ಮ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದು, ನಗರದ ಸಾರ್ವ ಜನಿಕರು ಜನರಿಂದ ಜನರಿಗಾಗಿ ಜಾರಿಯಾಗುತ್ತಿರುವ ಜನತಾ ಕಫ್ರ್ಯೂ ದಲ್ಲಿ `ಕೊರೊನಾ ವಿರುದ್ಧ ಒಂದಾಗೋಣ ಮನೆಯಲ್ಲೇ ಇರೋಣ-ಕೊರೊನಾ ತಡೆಯೋಣ’ ಎಂಬ ಧ್ಯೇಯದೊಂದಿಗೆ ಕಫ್ರ್ಯೂನಲ್ಲಿ…
ಕೊರೊನಾ ಸೈನಿಕರಾಗಲು ಉತ್ಸುಕರಾದ ಮೈಸೂರು ಸ್ವಯಂ ಸೇವಕರು
March 22, 2020ಮೈಸೂರು,ಮಾ.21-ಕೋವಿಡ್-19 ವೈರಸ್ ಹರಡುವಿಕೆ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವದಂತಿ ಹರಡುತ್ತಿದ್ದು, ಇದರ ಪರಿಣಾಮ ಸರ್ಕಾರದ ವಿವಿಧ ಇಲಾಖೆ ಗಳ ಆಡಳಿತ ವ್ಯವಸ್ಥೆಗೆ ಅಡಚಣೆ ಉಂಟಾ ಗಿದೆ. ಇದನ್ನು ತಪ್ಪಿಸುವ ಸಲುವಾಗಿ ಕೊರೊನಾ ಯೋಧರನ್ನು ನೇಮಿಸಲಾ ಗಿದೆ ಎಂದು ವಾರ್ತಾ ಮತ್ತು ಸಾರ್ವ ಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಆರ್.ರಾಜು ಹೇಳಿದರು. ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿ ಸಭಾಂ ಗಣದಲ್ಲಿ ಶನಿವಾರ ಕೊರೊನಾ ಸೈನಿಕರ ಸ್ವಯಂ ಸೇವಕರೊಂದಿಗೆ ಚರ್ಚಿಸಿದ ಅವರು, ಕೊರೊನಾ…
ಕೊರೊನಾ ವೈರಸ್ ತಡೆಗೆ ಜೆಎಸ್ಎಸ್ ಆಸ್ಪತ್ರೆಯಲ್ಲಿ ಮುಂಜಾಗ್ರತಾ ಕ್ರಮ
March 22, 2020ಮೈಸೂರು, ಮಾ.21-ಕೊರೊನಾ ವೈರಸ್ ತಡೆಗೆ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅದರಂತೆ ಎಲ್ಲಾ ಹೊರ ರೋಗಿ ವಿಭಾಗಗಳು ಮುಂದಿನ ಸೂಚನೆವರೆಗೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆವ ರೆಗೆ ಕಾರ್ಯ ನಿರ್ವಹಿಸಲಿವೆ. ತುರ್ತು ಚಿಕಿತ್ಸೆ ಹೊರತುಪಡಿಸಿ ಆಸ್ಪತ್ರೆಗೆ ಅನಗತ್ಯ ವಾಗಿ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ. ಎಲ್ಲಾ ಪ್ರಯೋಗಾಲಯಗಳು ಮತ್ತು ಔಷಧಾಲಯ ಸೇವೆಗಳು ಎಂದಿನಂತೆ ಇರುತ್ತದೆ. ತುರ್ತು ಚಿಕಿತ್ಸಾ ವಿಭಾಗ ಎಂದಿನಂತೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ದಂತ ಚಿಕಿತ್ಸಾ ವಿಭಾಗದ ಸೌಲಭ್ಯವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ….
ಕೊರೊನಾ ಪೀಡೆ; ಜನರಿಗೆ ನೆರವಾಗಲು ಬಿಜೆಪಿ `ಕಾರ್ಯಪಡೆ’
March 22, 2020ಮೈಸೂರು,ಮಾ.21(ಪಿಎಂ)- ಕೊರೊನಾ ಹರಡುವಿಕೆ ತಡೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕೆ ಕರೆ ನೀಡಿರುವ `ಜನತಾ ಕಫ್ರ್ಯೂ’ಗೆ ಮೈಸೂ ರಿನ ಜನತೆ ಬೆಂಬಲ ನೀಡಬೇಕೆಂದು ಬಿಜೆಪಿಯ ಮೈಸೂರು ನಗರ ಘಟಕ ಮನವಿ ಮಾಡಿದೆ. ಜತೆಗೆ, ಕೊರೊನಾ ಸಮಸ್ಯೆ ಇರುವವರೆಗೂ ಹಿರಿಯ ನಾಗರಿಕರು, ಅನಾರೋಗ್ಯ ಪೀಡಿತರು ಹಾಗೂ ಮಕ್ಕಳ ತುರ್ತು ಅಗತ್ಯಗಳಿಗೆ ಸ್ಪಂದಿಸಲು ನಗರದ ಎಲ್ಲಾ ವಾರ್ಡ್ಗಳಲ್ಲಿ `ಕಾರ್ಯಪಡೆ’ ಯನ್ನು ರಚಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಜೆಪಿ ನಗರಾಧ್ಯಕ್ಷ ಟಿ.ಎಸ್….
ಕೊರೊನಾ ವೈರಸ್ ಪ್ರಭಾವ: ಕೃಷಿ ಉತ್ಪನ್ನಗಳ ಬೆಲೆ ಕುಸಿತ: ರೈತರು ಕಂಗಾಲು
March 22, 2020ಮೈಸೂರು, ಮಾ. 21- ದೇಶಾದ್ಯಂತ ಕೊರೊನಾ ವೈರಸ್ ಪ್ರಭಾವದಿಂದ ಕೃಷಿ ಉತ್ಪನ್ನ ಗಳು, ತರಕಾರಿ, ಹಣ್ಣುಗಳ ಬೆಲೆಯಲ್ಲಿ ಇಳಿ ಮುಖವಾಗಿ ಮಾರುಕಟ್ಟೆಯಲ್ಲಿ ಖರೀದಿದಾರರು ಕಡಿಮೆಯಾಗಿ ಬೇಡಿಕೆ ಕುಸಿಯುತ್ತಿದೆ. ಮೆಕ್ಕೆಜೋಳ ಬೆಳೆದ ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ. ಕುಕ್ಕುಟ ಉದ್ಯಮದ ಕೋಳಿ ಸಾಕಾ ಣಿಕೆಕಾರರು ಖರೀದಿ ನಿಲ್ಲಿಸಿರುವ ಕಾರಣ ಕ್ವಿಂಟಾಲ್ಗೆ 2200 ರೂ. ಬೆಲೆಯಿದ್ದ ಮೆಕ್ಕೆಜೋಳದ ಬೆಲೆ 1 ಸಾವಿರ ರೂಗಳಿಗೆ ಇಳಿಮುಖವಾಗಿದೆ. ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್ಗೆ 1760 ರೂ.ಗೆ ಸರ್ಕಾರ ನಿಗದಿ ಮಾಡಲಾಗಿದೆ….
ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿಕೆಶಿ ಸಾರ್ವಜನಿಕರ ಭೇಟಿ ಸದ್ಯಕ್ಕೆ ಸ್ಥಗಿತ
March 22, 2020ಬೆಂಗಳೂರು, ಮಾ.21(ಕೆಎಂಶಿ)- ಕೊರೊನಾ ಕ್ಷಿಪ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆ ಯಲ್ಲಿ, ಬಂದು ಹೋಗುವವರ ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕರ ಭೇಟಿಯನ್ನು ಇಂದಿನಿಂದ ಕೆಲವು ದಿನಗಳ ಕಾಲ ಮುಂದೂಡಲಾಗಿದೆ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ತಿಳುವಳಿಕೆ ಪ್ರಕಾರ ಕೊರೊನಾ ಕಾಯಿಲೆಯು ದೈಹಿಕ ಸ್ಪರ್ಶ ಹಾಗೂ ಪರಸ್ಪರ ಉಸಿರಾಟದ ಸೋಂಕಿನಿಂದ ಅತೀ ವೇಗವಾಗಿ ಹರಡುತ್ತಿದೆ. ಕೇಂದ್ರ ಹಾಗೂ ರಾಜ್ಯದ ಆಡಳಿತಾರೂಢ ಸರ್ಕಾರಗಳು ಈ ಕುರಿತು ಕೆಲವು ಸೂಚನೆಗಳನ್ನು ನೀಡಿವೆ. ಈ ಎಲ್ಲದರ ಹಿನ್ನೆಲೆಯಲ್ಲಿ ತಮ್ಮ ಸದಾಶಿವನಗರ…
ಕ್ಯಾಟ್ ಫಿಶ್ ಸಾಗಿಸುತ್ತಿದ್ದ ಮೂವರ ಬಂಧನ
March 22, 2020ಮಡಿಕೇರಿ, ಮಾ.21- ಮಾರಕ ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಲ್ಲ ಕ್ಯಾಟ್ಫಿಶ್ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಕೊಡಗು ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿ ಬಂಧಿಸಿದ್ದಾರೆ. ಮಧ್ಯಪ್ರದೇಶ ಮೂಲದ ಲಾರಿ ಚಾಲಕ ವಿ.ಕೆ.ನೇಮಿಚಂದ್(40), ಕ್ಲೀನರ್ ಸೋಮ್ ಲಾಲ್(28) ಹಾಗೂ ಚಿಕ್ಕಬಳ್ಳಾಪುರದ ಅಂಜಪ್ಪ(45) ಬಂಧಿತ ಆರೋಪಿಗಳು. ಇವರಿಂದ ಲಕ್ಷಾಂತರ ರೂ. ಮೌಲ್ಯದ ಕ್ಯಾಟ್ಫಿಶ್ ವಶಪಡಿಸಿಕೊಂಡು ಲಾರಿ ಸಹಿತ ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕರಿಗೆ ಹಸ್ತಾಂತರಿಸಲಾಗಿದೆ. ದೇಶದಲ್ಲಿ 2000 ಇಸವಿಯಲ್ಲೇ ಕ್ಯಾಟ್ ಫಿಶ್ ಬ್ಯಾನ್ ಮಾಡಲಾಗಿದ್ದರೂ, ಕ್ಯಾನ್ಸರ್ಗೆ ಔಷಧಿ ಇದೆಯೆಂಬ ಸುಳ್ಳು ಸುದ್ದಿ…