ಮೈಸೂರು,ಮಾ.18(ವೈಡಿಎಸ್)- ಕೊರೊನಾ ಮತ್ತು ಹಕ್ಕಿಜ್ವರ ಭೀತಿ ಹಿನ್ನೆಲೆಯಲ್ಲಿ ನಗರದ ಸಾರ್ವ ಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಮೈಸೂರು ಮಹಾನಗರ ಪಾಲಿಕೆಯಲ್ಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ಅಚ್ಚರಿ ಮತ್ತು ಆಘಾತಕ್ಕೆ ಕಾರಣವಾಗಿದೆ. ನಿತ್ಯವೂ ಸಾವಿರಾರು ಜನರು ಬಂದು ಹೋಗುವ ನಗರಪಾಲಿಕೆಯಲ್ಲಿ ಸದ್ಯ ಕೊರೊನಾದ ಕೋವಿಡ್-19 ವೈರಸ್ ಸೋಂಕು ಹರಡದಂತೆ ತಡೆಯುವುದಕ್ಕೆ ಯಾವುದೇ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿ ಲ್ಲದಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿ ಸಿದೆ. ಕೊರೊನಾ ಹರಡದಂತೆ ತಡೆಯಲು ಜಿಲ್ಲಾಡ ಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂ ಡಿದೆ….
ದಂತ ಚಿಕಿತ್ಸೆಗೂ `ಕೊರೊನಾ’ ಅಡ್ಡಗಾಲು!
March 19, 2020ಮೈಸೂರು, ಮಾ.18(ಪಿಎಂ)- ದಂತ ಚಿಕಿತ್ಸೆಗೂ `ಕೊರೊನಾ’ ಭೀತಿ ಎದುರಾಗಿದೆ. ಡೆಂಟಲ್ ಕ್ಲಿನಿಕ್ ಮತ್ತು ಆಸ್ಪತ್ರೆಗಳು ತುರ್ತು ಅಗತ್ಯವಲ್ಲದ ದಂತ ವೈದ್ಯಕೀಯ ಸೇವೆಗಳನ್ನು ಮಾ.31ರವರೆಗೆ ಸ್ಥಗಿತ ಗೊಳಿಸಬೇಕು ಎಂದು `ಇಂಡಿಯನ್ ಡೆಂಟಲ್ ಅಸೋಸಿಯೇಷನ್’(ಐಡಿಎ) ನಿರ್ದೇಶನ ನೀಡಿದೆ. ಇಡೀ ದೇಶದಲ್ಲಿ ಗಂಭೀರ ದಂತ ಸಮಸ್ಯೆಗಳನ್ನು ಹೊರತುಪಡಿಸಿ ಉಳಿದ ಚಿಕಿತ್ಸಾ ಸೇವೆಗಳು ವ್ಯತ್ಯಯ ವಾಗಲಿವೆ. ಸಾರ್ವಜನಿಕರು ತುರ್ತು ಅಗತ್ಯವಿಲ್ಲ ದಿದ್ದಲ್ಲಿ ದಂತ ಚಿಕಿತ್ಸೆಗಾಗಿ ಆಸ್ಪತ್ರೆ ಅಥವಾ ಕ್ಲಿನಿಕ್ ಗಳಿಗೆ ತೆರಳದಿರುವುದೇ ಸೂಕ್ತ ಎನ್ನಲಾಗಿದೆ. ದಂತ ಚಿಕಿತ್ಸೆ, ಶಸ್ತ್ರಚಿಕಿತ್ಸೆ ವೇಳೆ ವೈದ್ಯರು ರೋಗಿಯ…
ಕೋಲ್ಡ್ ಫ್ರಿಡ್ಜ್ನ ಸ್ವೀಟ್ಸ್, ತಂಪು ಪಾನೀಯಕ್ಕೂ ಕೊರೊನಾ ಕಾಟ!
March 19, 2020ಮೈಸೂರು, ಮಾ.18(ಪಿಎಂ)- ಬೇಸಿಗೆ ತಾಪ ತಾಳ ಲಾರದೇ ಯಾವುದಾದರೂ ಹೋಟೆಲ್ನಲ್ಲಿ ತಣ್ಣನೆಯ ತಂಪು ಪಾನೀಯ ಸೇರಿದಂತೆ ಕೋಲ್ಡ್ ಫ್ರಿಡ್ಜ್ನಲ್ಲಿ ಶೇಖರಿಸಿ ಮಾರಾಟ ಮಾಡುವ ಸ್ವೀಟ್ಸ್ ತಿನ್ನಲು ಬಯಕೆಯಾದರೆ ಅದಕ್ಕೂ ಕೊರೊನಾ ವೈರಾಣು ಅಡ್ಡಿಯಾಗಲಿದೆ! ಹೌದು, ಏರ್ ಕಂಡೀಷನರ್ಗಳಿಂದಲೂ ಕೊರೊನಾ ಹರಡುತ್ತದೆ ಎನ್ನಲಾಗಿರುವ ಹಿನ್ನೆಲೆಯಲ್ಲಿ ತಣ್ಣನೆಯ ಪಾನೀಯ ಹಾಗೂ ಕೋಲ್ಡ್ ಫ್ರಿಡ್ಜ್ನಲ್ಲಿಡುವ ಸಿಹಿ ತಿನಿಸು ಗಳ ಮೂಲಕವೂ ವೈರಸ್ ಹರಡುವ ಭೀತಿ ಎದುರಾ ಗಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರ ಸಂಘದ ಕಾರ್ಯಕಾರಿ ಸಮಿತಿಯು ಬುಧವಾರ ತುರ್ತು ಸಭೆ…
ಉತ್ತಮ ನಾಟಕ, ನಿರ್ದೇಶನ, ಪ್ರಸಾಧನ, ಪೋಷಕ ನಟ ಪ್ರಶಸ್ತಿ
March 19, 2020ಮೈಸೂರು, ಮಾ. 18- ಮೈಸೂರಿನ ಎಸ್ಬಿಆರ್ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕøತಿಕ ರಂಗ ತಂಡ (ಸಾರಂತ) ಬಳ್ಳಾರಿಯ ರಂಗತೋರಣ, ಇತ್ತೀಚೆಗೆ ನಡೆಸಿದ 13ನೆಯ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಭಾಗ ವಹಿಸಿತ್ತು. ಕಾಲೇಜಿನ 19 ವಿದ್ಯಾರ್ಥಿ ಗಳು ಪಾಲ್ಗೊಂಡು `ಅಂಧಯುಗ’ ನಾಟಕವನ್ನು ಅಭಿನಯಿಸಿದರು. ಧರ್ಮವೀರ್ ಭಾರತಿ ಅವರ ‘ಅಂಧ ಯುಗ್’ ಹಿಂದಿ ನಾಟಕದ ಕನ್ನಡ ಅನು ವಾದವನ್ನು ಸಿದ್ದಲಿಂಗಪಟ್ಟಣಶೆಟ್ಟಿ ಹಾಗೂ ತಿಪ್ಪೇಸ್ವಾಮಿ ಮಾಡಿದ್ದಾರೆ. ಈ ನಾಟಕವನ್ನು ನಿರ್ದೇಶಿಸಿದವರು ಶ್ರೇಯಸ್.ಪಿ ಹಾಗೂ ಸಂಗೀತ ನಿರ್ದೇಶನ ಸುಬ್ರಹ್ಮಣ್ಯ ಮೈಸೂರು….
ಹಕ್ಕಿಜ್ವರ ಭೀತಿ: ಮೃಗಾಲಯದ ಪ್ರಾಣಿಗಳಿಗೆ ಕೋಳಿಮಾಂಸ, ಮೊಟ್ಟೆ ಸದ್ಯಕ್ಕೆ ಸ್ಥಗಿತ
March 19, 2020ಪರ್ಯಾಯವಾಗಿ ಕುರಿಮಾಂಸ ಪೂರೈಕೆ; ಮೊಟ್ಟೆಗೆ ಬದಲು ಪೌಷ್ಠಿಕಾಂಶ ಆಹಾರ ಮೈಸೂರು,ಮಾ.18(ಎಂಟಿವೈ)- ಹಕ್ಕಿಜ್ವರ(ಹೆಚ್5ಎನ್1) ಸೋಂಕು ಮೈಸೂರಲ್ಲಿ ಪತ್ತೆಯಾಗಿರುವುದರಿಂದ ಸೋಂಕು ಹರಡುವುದನ್ನು ತಡೆಯಲು ಮೈಸೂರು ಮೃಗಾ ಲಯದ ಕೆಲ ಮಾಂಸಾಹಾರಿ ಪ್ರಾಣಿಗಳಿಗೆ ನೀಡುತ್ತಿದ್ದ ಕೋಳಿ ಮಾಂಸ ಹಾಗೂ ಮೊಟ್ಟೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಬದಲಾಗಿ ನಿಯಮಿತವಾಗಿ ಕುರಿ ಮಾಂಸ ನೀಡಲಾಗುತ್ತಿದೆ. ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ಮಾ.9ರಂದು ಮೃತಪಟ್ಟ ಕೋಳಿಗಳಲ್ಲಿ ಹಾಗೂ ಹೆಬ್ಬಾಳು ಕೆರೆ ಬಳಿ ಸಾವಿಗೀಡಾದ ಪಕ್ಷಿಗಳಲ್ಲಿ ಹೆಚ್5ಎನ್1 ಪತ್ತೆಯಾಗಿದ್ದರಿಂದ ಮೈಸೂರು ಸುತ್ತಮುತ್ತ ಕೋಳಿ, ಸಾಕು ಪಕ್ಷಿಗಳನ್ನು ಸಾಮೂ ಹಿಕವಾಗಿ ಸಾಯಿಸಲಾಗುತ್ತಿದೆ. ಇದೇ…
ಅಂಗನವಾಡಿ ಕಾರ್ಯಕರ್ತೆಯರಿಗಾಗಿ ಕಾರ್ಯಾಗಾರ
March 19, 2020ಮೈಸೂರು,ಮಾ.18- ಮೈಸೂರಿನ ಅರ್ಲಿ ಚೈಲ್ಡ್ಹುಡ್ ಅಸೋಸಿಯೇಷನ್ ವತಿಯಿಂದ ಮೈಸೂರಿನ ಕೆಸರೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗಾಗಿ `ಪೂರ್ವ ಪ್ರಾಥಮಿಕ ಶಿಕ್ಷಕರ ಪಾತ್ರ’ ಕುರಿತು ತರಬೇತಿ ಕಾರ್ಯಾಗಾರ ನಡೆಸಲಾಯಿತು. ಆರೋಗ್ಯ, ನೈರ್ಮಲ್ಯ, ಸುರಕ್ಷತೆ, ನಡವಳಿಕೆ ನಿರ್ವಹಣೆ ಮತ್ತು ಬಾಲ್ಯದ ಅತ್ಯುತ್ತಮ ಅಭ್ಯಾಸಗಳ ಮೇಲೆ ಕೇಂದ್ರೀಕರಿಸುವ ಬಗ್ಗೆ ಕಾರ್ಯಾಗಾರದಲ್ಲಿ ತರಬೇತಿ ನೀಡಲಾ ಯಿತು. ಕಾರ್ಯಾಗಾರವನ್ನು ಅರ್ಲಿ ಚೈಲ್ಡ್ ಹುಡ್ ಅಸೋಸಿಯೇಷನ್, ಮೈಸೂರು ಪ್ರಾಂತ್ಯದ ಮುಖ್ಯಸ್ಥರು ಮತ್ತು ಪೆÇೀದಾರ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ ಹಾಗೂ ಬನ್ನಿಮಂಟಪದ ಪೆÇೀದಾರ್ ಜಂಬೊ ಕಿಡ್ಸ್ ಫ್ರಾಂಚೈಸಿಗಳಾದ ಶಬಾನಾ ಎನ್…
ದಸಂಸ ಅವಲೋಕನಕ್ಕಾಗಿ ಚಿಂತನಾ ಸಭೆ
March 19, 2020ಮೈಸೂರು, ಮಾ.18(ವೈಡಿಎಸ್)- ದಲಿತ ಸಂಘರ್ಷ ಸಮಿತಿಯು ರೈತ ಮತ್ತು ಪ್ರಗತಿಪರ ಚಳವಳಿಗಳಿಗೆ ತಾಯಿ ಇದ್ದಂತೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಹರಿಹರ ಆನಂದಸ್ವಾಮಿ ಹೇಳಿದರು. ಅಗ್ರಹಾರದ ನವಗ್ರಹ ದೇವಸ್ಥಾನ ರಸ್ತೆಯ ವಿವಿ ಮಾರ್ಕೆಟ್ ಕಟ್ಟಡದಲ್ಲಿ ಆಯೋಜಿಸಿದ್ದ `ದಲಿತ ಸಂಘರ್ಷ ಸಮಿತಿ ಅವ ಲೋಕನಕ್ಕಾಗಿ ಚಿಂತನಾ ಸಭೆ’ ಉದ್ಘಾಟಿಸಿದ ಅವರು, 1970ರ ವೇಳೆ ಬೂಸಾ ಚಳವಳಿ ಪ್ರಾರಂಭವಾದಾಗ ಬಿ.ಬಸವಲಿಂಗಪ್ಪ ಅವರು ವೈದಿಕಶಾಹಿ ನಿಲುವುಗಳನ್ನು ಖಂಡಿಸುತ್ತಿದ್ದರು. ಈ ವೇಳೆ ದಸಂಸ ದೊಡ್ಡ ಚಳವಳಿಯಾಗಿ ಹುಟ್ಟಿಕೊಂಡಿತು. ಮೊದಲನೇ ಬಾರಿಗೆ ಭದ್ರಾವತಿಯಲ್ಲಿ…
ಕೊರೊನಾ ವಿರುದ್ಧ ನೈರುತ್ಯ ರೈಲ್ವೆ ಮುನ್ನೆಚ್ಚರಿಕಾ ಕ್ರಮ
March 19, 2020ಮೈಸೂರು, ಮಾ.18(ಆರ್ಕೆಬಿ)- ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮೈಸೂರು ರೈಲು ನಿಲ್ದಾಣದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣಾ ಗರ್ಗ್ ಮತ್ತು ಮೈಸೂರು ರೈಲ್ವೆ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಹಾಗೂ ವಿಭಾಗೀಯ ಅಧಿಕಾರಿಗಳ ತಂಡ ಬುಧವಾರ ಪರಿಶೀಲಿಸಿತು. ನಿಲ್ದಾಣದಲ್ಲಿ ಸ್ಯಾನಿಟೈಸರ್ ದ್ರಾವಣವನ್ನು ಪುನರಾವರ್ತಿಸುತ್ತಿರುವಂತೆ ಅಪರ್ಣಾ ಗರ್ಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ರೈಲು ನಿಲ್ದಾಣದಲ್ಲಿನ `ಕೋವಿದ್-19’ ಸಹಾಯವಾಣಿಗೆ ದಾರಿ ತೋರುವ ದಿಕ್ಸೂಚಿ ಫಲಕಗಳನ್ನು ನಿಲ್ದಾಣದ ಎಲ್ಲಾ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ, ಪಾದಚಾರಿ…
ಮನೆಗಳವು: ಮೂವರ ಬಂಧನ, 18 ಲಕ್ಷ ರೂ. ಚಿನ್ನಾಭರಣ ವಶ
March 19, 2020ನಸುಕಿನ 4.45ರಲ್ಲಿ ಅನುಮಾನಾಸ್ಪದ ರೀತಿ ಸಂಚರಿಸುತ್ತಿದ್ದಾಗ ಸೆರೆ 205 ಗ್ರಾಂ ಚಿನ್ನ, 26 ಗ್ರಾಂ ವಜ್ರಾಭರಣ, 5 ಕೆಜಿ ಬೆಳ್ಳಿ ಆಭರಣ ವಶ ಇಬ್ಬರು ಆರೋಪಿಗಳಿಗೆ ಹಲವು ಮನೆಗಳವು ಪ್ರಕರಣಗಳಲ್ಲಿ ಜೈಲು ಉದಯಗಿರಿ ಠಾಣೆ ವ್ಯಾಪ್ತಿ-5, ನಜರ್ಬಾದ್-1, ಆಲನಹಳ್ಳಿ-1 ಮನೆಗಳವು ಮೈಸೂರು,ಮಾ.18(ಎಂಕೆ)-ರಾತ್ರಿ ವೇಳೆ ಬೀಗ ಹಾಕಿದ್ದ ಮನೆಗಳ ಬಾಗಿಲು ಮುರಿದು ಚಿನ್ನಾಭರಣ ದೋಚುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ರುವ ಉದಯಗಿರಿ ಠಾಣೆ ಪೊಲೀಸರು, 18 ಲಕ್ಷ ರೂ. ಮೌಲ್ಯದ ವಜ್ರ, ಚಿನ್ನ ಮತ್ತು ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ….
ವೈರಸ್ ಸೋಂಕು ತಡೆಗೆ ಪ್ರಾಣಾಯಾಮ, ಅಗ್ನಿಹೋತ್ರ ಮದ್ದು
March 19, 2020`ಕೊರೊನಾ’ ಹರಡುವಿಕೆ ತಡೆಗೆ ಶಾಸಕ ರಾಮದಾಸ್ ನೇತೃತ್ವದಲ್ಲಿ ಕಾರ್ಯಾಗಾರ, ಅಗ್ನಿಹೋತ್ರ ತರಬೇತಿ ಮೈಸೂರು, ಮಾ.18(ಆರ್ಕೆಬಿ)- ಕೊರೊನಾ ವೈರಸ್ ಹರಡದಂತೆ ಕೈಗೊಳ್ಳ ಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸಲು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ನೇತೃತ್ವ ದಲ್ಲಿ ಬುಧವಾರ ಮೈಸೂರಿನ ವಿದ್ಯಾ ಶಂಕರ ಕಲ್ಯಾಣ ಮಂಟಪದಲ್ಲಿ ಕಾರ್ಯಾ ಗಾರ ನಡೆಯಿತು. ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ 270 ಬೂತ್ಗಳ ಅಧ್ಯಕ್ಷರು, ಪದಾಧಿಕಾರಿಗಳು, ಆಸಕ್ತರು ಕಾರ್ಯಾ ಗಾರದಲ್ಲಿ ಭಾಗವಹಿಸಿದ್ದರು. ಕೊರೊನಾ ವೈರಸ್ ಎಂದರೇನು? ಹೇಗೆ ಹರಡುತ್ತದೆ? ತಡೆಗೆ ಅನುಸರಿಸ ಬೇಕಾದ…