ಮೈಸೂರು, ಅ.19(ಪಿಎಂ)- ಮೈಸೂರು ವಿವಿ ಸಹ ಯೋಗದೊಂದಿಗೆ ಆಲ್ ಇಂಡಿಯಾ ಕರಾಟೆ ಡೋ ಮತ್ತು ಕೊಬುಡೋ ಪ್ರೊಮೋಷನ್ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿರುವ ಕರಾಟೆ ಮತ್ತು ಕೊಬುಡೋ ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ಶನಿವಾರ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ. ಹೇಮಂತ್ಕುಮಾರ್ ಚಾಲನೆ ನೀಡಿದರು. ಮೈಸೂರು ವಿವಿಯ ಸ್ಪೋಟ್ರ್ಸ್ ಪೆವಿಲಿಯನ್ನ ಒಳಾಂ ಗಣ ಕ್ರೀಡಾಂಗಣದಲ್ಲಿ ಫೌಂಡೇಷನ್ನ 9ನೇ ವಾರ್ಷಿಕೋ ತ್ಸವದ ಅಂಗವಾಗಿ ಏರ್ಪಡಿಸಿರುವ ಕರಾಟೆ ಮತ್ತು ಕೊಬುಡೋ ಪಂದ್ಯಾವಳಿಗೆ ಕುಲಪತಿಗಳು ಚಾಲನೆ ನೀಡಿ ದರು. ಬಳಿಕ ಮಾತನಾಡಿದ ಅವರು, ಕರಾಟೆ…
ಮೈಸೂರಿನಲ್ಲಿ ರೈತ ಸಂಘದಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ
October 20, 2019ಮೈಸೂರು, ಅ.19(ಪಿಎಂ)- ಕೃಷಿ ಕ್ಷೇತ್ರ ಹಾಗೂ ಆಹಾರ ಉತ್ಪನ್ನಗಳನ್ನು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದದ ವ್ಯಾಪ್ತಿಗೆ ತರಬಾರದೆಂದು ಆಗ್ರಹಿಸಿ ಅ.24ರಂದು ಮೈಸೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸೂರು ಕುಮಾರ್ ತಿಳಿಸಿದರು. ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ಉತ್ಪನ್ನಗಳು ಹಾಗೂ ಕೃಷಿ ಕ್ಷೇತ್ರವನ್ನು ಆರ್ಸಿಇಪಿ ಮುಕ್ತ ವ್ಯಾಪಾರ…
ಮಹಾರಾಷ್ಟ್ರ, ಹರಿಯಾಣ ವಿಧಾನಸಭೆಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ
October 20, 2019ಇಂದು ಮನೆ ಮನೆ ಪ್ರಚಾರಕ್ಕೆ ಅವಕಾಶ ಮುಂಬೈ: ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆಬಿದ್ದಿದೆ. ನಾಳೆ ಅಭ್ಯರ್ಥಿ ಗಳು ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಅವಕಾಶ ಮಾಡಿಕೊಡಲಾಗಿದೆ. ರಾಜಕೀಯ ಪಕ್ಷಗಳು ಮತದಾರರ ಮನವೊಲಿಸಲು ಅಂತಿಮ ಸುತ್ತಿನ ಪ್ರಯತ್ನ ಮಾಡಲಿದ್ದಾರೆ. ಮಹಾರಾಷ್ಟ್ರದ 288 ಮತ್ತು ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಇದೇ ಅ.21ಕ್ಕೆ ನಡೆಯಲಿದೆ. ಇದೇ ವೇಳೆ 17 ರಾಜ್ಯಗಳ 2 ಲೋಕಸಭಾ ಮತ್ತು 51 ವಿಧಾನಸಭಾ ಕ್ಷೇತ್ರಗಳಿಗೂ ಮತದಾನವಾಗ ಲಿದೆ….
ಮೈಸೂರಿನಲ್ಲಿ ಬ್ಯಾಡ್ಮಿಂಟನ್ ತರಬೇತಿ ಕೇಂದ್ರ ಆರಂಭ
October 20, 2019ಮೈಸೂರು, ಅ.19(ಪಿಎಂ)- ಮೈಸೂರು ಮತ್ತು ಸುತ್ತಮುತ್ತಲ ಬ್ಯಾಡ್ಮಿಂಟನ್ ಪಟುಗಳಿಗೆ ಉತ್ತಮ ತರಬೇತಿ ಸೌಲಭ್ಯ ಒದಗಿ ಸುವ ಉದ್ದೇಶದಿಂದ ಬೆಂಗಳೂರಿನ ಯಾದವ್ ಪ್ರೊ ಬ್ಯಾಡ್ಮಿಂ ಟನ್ ಅಕಾಡೆಮಿ ವತಿಯಿಂದ ಮೈಸೂರಿನಲ್ಲಿ ತರಬೇತಿ ಕೇಂದ್ರ ಆರಂಭಿಸಲಾಗಿದೆ ಎಂದು ಅಕಾಡೆಮಿಯ ಮುಖ್ಯ ತರಬೇತು ದಾರ ಕೆ.ಜಗದೀಶ್ ಯಾದವ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬೋಗಾದಿಯ ಆದಿತ್ಯ ಸ್ಪೋಟ್ರ್ಸ್ ಅರೇನಾದಲ್ಲಿ ನಮ್ಮ ಅಕಾಡೆಮಿ ವತಿಯಿಂದ ತರಬೇತಿ ಕೇಂದ್ರ ಕಳೆದ ತಿಂಗಳಿಂದ ಕಾರ್ಯಾರಂಭ ಮಾಡಿದೆ. ಮೈಸೂರು…
ಮಹಾರಾಷ್ಟ್ರದಲ್ಲಿ ಅಮಿತ್ ಶಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
October 20, 2019ಮುಂಬೈ: ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರಯಾಣಿಸು ತ್ತಿದ್ದ ಹೆಲಿಕಾಪ್ಟರ್ ಶನಿವಾರ ತುರ್ತು ಭೂಸ್ಪರ್ಶ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕೊನೆಯ ದಿನದ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಅಮಿತ್ ಶಾ ಅವರ ಹೆಲಿಕಾಪ್ಟರ್ ಇಂದು ಮಧ್ಯಾಹ್ನ ನಾಸಿಕ್ನ ಓಜರ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಮಿತ್ ಶಾ ಅವರ ಹೆಲಿಕಾಪ್ಟರ್ ನಾಸಿಕ್ನಿಂದ 70 ಕಿಲೋಮೀಟರ್ ದೂರದಲ್ಲಿರುವ ಅಹ್ಮದ್ನಗರ್ ಜಿಲ್ಲೆಯ ಅಕೋಲೆಗೆ ತೆರಳುತ್ತಿತ್ತು,…
ಮೈಸೂರು, ಬೆಂಗಳೂರು, ಕರಾವಳಿ ಉಗ್ರರ ಸುರಕ್ಷಿತ ತಾಣ
October 19, 2019ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು, ರಾಜಧಾನಿ ಬೆಂಗಳೂರು ಹಾಗೂ ಕರಾವಳಿ ಪ್ರದೇಶ ಉಗ್ರವಾದಿಗಳ ಸುರಕ್ಷಿತ ಅಡಗುತಾಣವಾಗಿದ್ದು, ರಾಷ್ಟ್ರೀಯ ತನಿಖಾ ದಳ(ಎನ್ಐಎ) ರಾಜ್ಯ ಸರ್ಕಾರಕ್ಕೆ ನೀಡಿದ ಮಾಹಿತಿ ಆಧರಿಸಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಎನ್ಐಎ ಮಾಹಿತಿಯನ್ನು ಗಂಭೀರ ವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವು ಭಯೋತ್ಪಾದನಾ ನಿಗ್ರಹ ದಳ (ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್-ಎಟಿಎಸ್) ರಚನೆಗೆ ನಿರ್ಧರಿಸಿದೆ. ಕರ್ನಾಟಕಕ್ಕೆ ಭಯೋತ್ಪಾ ದಕರು ನುಸುಳಿದ್ದಾರೆ ಎಂಬ ಎನ್ಐಎ ಮಾಹಿತಿಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಖಚಿತಪಡಿಸಿದ್ದಾರೆ. ಇಂದು ಮೈಸೂರಿ ನಲ್ಲಿ ಸುದ್ದಿಗಾರ…
ರಾಜ್ಯ ವಿಭಜನೆಗೆ ಮತ್ತೆ ‘ಕತ್ತಿ’ ವರಸೆ!
October 19, 2019ಬೆಂಗಳೂರು: ಜಿಲ್ಲೆ ಗಳ ಪುನರ್ ರಚನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿ ರುವ ಬೆನ್ನಲ್ಲೇ ಬಿಜೆಪಿಯ ಹಿರಿಯ ಶಾಸಕ ಉಮೇಶ್ ಕತ್ತಿ ಉತ್ತರ ಕರ್ನಾಟಕದ ಅಭಿವೃದ್ಧಿ ಯಾಗಬೇಕಾದರೆ ರಾಜ್ಯ ವಿಭಜನೆಯಾಗಲೇ ಬೇಕೆಂದು ಒತ್ತಾಯಿಸಿದ್ದಾರೆ. ಕರ್ನಾಟಕವನ್ನು ವಿಭಜನೆ ಮಾಡುವ ಪ್ರಸ್ತಾಪ ವಷ್ಟೇ ಅಲ್ಲ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸುದ್ದಿಗೋಷ್ಠಿಯಲ್ಲಿ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನಮ್ಮ ರೈತರಿಗೆ ದಕ್ಕ ಬೇಕಾದ ನೀರನ್ನು ಮಹಾರಾಷ್ಟ್ರಕ್ಕೆ ನೀಡುತ್ತೇವೆ ಎಂದು ಮುಖ್ಯ ಮಂತ್ರಿಯವರು ಹೇಳಿದ್ದಾರೆ. ಅವರಿಗೇನಾದರೂ ಬುದ್ಧಿ ಇದೆಯಾ…
ಮತದಾರರ ಪಟ್ಟಿ ದೃಢೀಕರಿಸಿಕೊಳ್ಳಲು ನ.18ರವರೆಗೆ ಕಾಲಾವಕಾಶ
October 19, 2019ಬೆಂಗಳೂರು: ಮತದಾರರ ದೃಢೀಕರಣ ಆಂದೋಲನದ (ಇವಿಪಿ) ಅವಧಿಯನ್ನು ನ.18ರವರೆಗೂ ವಿಸ್ತರಿಸಿ ಕೇಂದ್ರ ಚುನಾವಣಾ ಆಯೋಗ ಶುಕ್ರ ವಾರ ಆದೇಶ ಹೊರಡಿಸಿದೆ. `ಸಂಪೂರ್ಣ ದೋಷಮುಕ್ತ ಮತದಾರರ ಪಟ್ಟಿ’ ಸಿದ್ಧಪಡಿಸುವ ಉದ್ದೇಶದಿಂದಲೇ ಕೇಂದ್ರ ಚುನಾವಣಾ ಆಯೋಗ ಈ ಆಂದೋ ಲನವನ್ನು ಕೈಗೆತ್ತಿಕೊಂಡಿದೆ. ಮತದಾನ ದಿನ ಮತದಾರರು ಪಟ್ಟಿಯಲ್ಲಿ ನಮ್ಮ ಹೆಸರಿಲ್ಲ, ವಿಳಾಸ ತಪ್ಪಾಗಿದೆ, ಬೂತ್ ಗೊಂದಲ ಎಂದು ದೂರುವಂತಾಗಬಾರದು. ಹಾಗಾಗಿ ಮತದಾರರ ಪಟ್ಟಿಯಲ್ಲಿನ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಆಯೋಗವು ಈ ಆಂದೋಲನ ನಡೆಸಿದೆ. ದೋಷಮುಕ್ತ ಮತದಾರರ…
ವಿಜ್ಞಾನದ ಕೊಡುಗೆ ಹಳ್ಳಿಗಳತ್ತ ಹೆಜ್ಜೆ ಇಡಬೇಕಿದೆ
October 18, 2019ಮೈಸೂರು,ಅ.17(ಆರ್ಕೆಬಿ)- ವಿಜ್ಞಾನ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದು, ಅವು ನಗರ ಪ್ರದೇಶಗಳಿಗೇ ಸೀಮಿತವಾಗದೆ ಹಳ್ಳಿಗಳತ್ತ ಹೆಜ್ಜೆ ಇಡಬೇಕಿದೆ ಎಂದು ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿ ಯೇಷನ್ ಅಧ್ಯಕ್ಷ ಹಾಗೂ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರು ವಿವಿ ಮಾನಸಗಂಗೋತ್ರಿ ವಿಜ್ಞಾನ ಭವನ ಸಭಾಂಗಣದಲ್ಲಿ ಗುರು ವಾರ `ವಿಜ್ಞಾನ ಮತ್ತು ತಂತ್ರಜ್ಞಾನ: ಗ್ರಾಮೀಣ ಅಭಿವೃದ್ಧಿ’ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶೇ.70ರಿಂದ 80ರಷ್ಟು ಜನ ಹಳ್ಳಿಗಳ ಲ್ಲಿದ್ದಾರೆ….
ಪೊಲೀಸ್ ಸರ್ಪಗಾವಲಲ್ಲಿ ಬಹು ನಿರೀಕ್ಷಿತ ರೈಲ್ವೆ ಕಂಟೇನರ್ ಕಾಮಗಾರಿ ಆರಂಭ
October 18, 2019ಮೈಸೂರು, ಅ.17(ಆರ್ಕೆ)-ಬಹು ನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷಿ ರೈಲ್ವೆ ಯೋಜನೆಯಾದ ಇನ್ಲ್ಯಾಂಡ್ ಕಂಟೇನರ್ ಡಿಪೋ ಕಾಮಗಾರಿಯು ಪೊಲೀಸ್ ಸರ್ಪಗಾವಲಿನಲ್ಲಿ ಬುಧವಾರ ಆರಂಭವಾಗಿದೆ. ರೈಲ್ವೆ ಇಲಾಖೆಯ ಕಂಟೇನರ್ ಕಾರ್ಪೋರೇಷನ್ ಆಫ್ ಇಂಡಿಯಾ(ಛಿಛಿIಐ) ಲಿಮಿಟೆಡ್ ವತಿಯಿಂದ ಉದ್ದೇ ಶಿತ ಯೋಜನೆಗೆ ಕಡಕೊಳ ಸಮೀಪ 55 ಎಕರೆ ವಿಸ್ತಾರದ ಪ್ರದೇಶದಲ್ಲಿ ನಂಜನಗೂಡು ಮತ್ತು ಮೈಸೂರು ದಕ್ಷಿಣ ಗ್ರಾಮಾಂತರ ಠಾಣಾ ಪೊಲೀಸರ ಭಾರೀ ಭದ್ರತೆ ಯಲ್ಲಿ ಕಡೆಗೂ ಕಾಮಗಾರಿಗೆ ಚಾಲನೆ ದೊರೆತಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯು 2017ರಲ್ಲೇ ಕಡಕೊಳ ಬಳಿ ರೈಲ್ವೇ…










