ಕೈಕೊಟ್ಟ ಮೈಷುಗರ್: ಕಬ್ಬು ಬೆಳೆಗಾರರ ಪ್ರತಿಭಟನೆ
ಮಂಡ್ಯ

ಕೈಕೊಟ್ಟ ಮೈಷುಗರ್: ಕಬ್ಬು ಬೆಳೆಗಾರರ ಪ್ರತಿಭಟನೆ

September 13, 2018

ಮಂಡ್ಯ: ತಾಂತ್ರಿಕ ಕಾರಣಗಳಿಂದ ಕುಂಟುತ್ತಾ ನಡೆಯುತ್ತಿರುವ ಮೈಷುಗರ್ ವಿರುದ್ಧ ಆಕ್ರೋಶಗೊಂಡಿರುವ ಕಬ್ಬು ಬೆಳೆಗಾರರು ಬುಧವಾರ ಆಡಳಿತ ಮಂಡಳಿಯ ವ್ಯವಸ್ಥಾಪಕರ ಮುಂದೆ ಪ್ರತಿಭಟನೆ ನಡೆಸಿದರು.

ಮೈಷುಗರ್‍ನಲ್ಲಿ ಕಬ್ಬು ಅರೆಯೋ ಕಾರ್ಯ ಸ್ಥಗಿತಗೊಂಡಿತ್ತು. ಇದರಿಂದ ರೊಚ್ಚಿಗೆದ್ದ ರೈತರು ಪ್ರತಿಭಟನೆಗಿಳಿದಿದ್ದರು ಸುದ್ದಿತಿಳಿದ ಶಾಸಕ ಎಂ.ಶ್ರೀನಿವಾಸ್ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಆಲಿಸಿದರು.

ಜಿಲ್ಲೆಯ ರೈತರ ಪ್ರಮುಖ ಬೇಡಿಕೆಯಂತೆಯೇ ಮೈಷುಗರ್ ಸಮ್ಮಿಶ್ರ ಸರ್ಕಾರದಲ್ಲಿ ಆರಂಭ ವಾಯಿತು. ಆದರೆ ಈಗ ತಾಂತ್ರಿಕ ಸಮಸ್ಯೆಯಿಂದ ಆಮೆ ವೇಗದಲ್ಲಿ ಸಾಗುತ್ತಿದೆ. ಸಹಜವಾಗಿಯೇ ರೈತರು ಆತಂಕಕ್ಕೀಡಾಗಿದ್ದಾರೆ, ಕಾರ್ಖಾನೆ ಯಾವಾಗ ನಿಂತು ಹೋಗುತ್ತೋ ಎಂಬ ಭಯ ನಮ್ಮನ್ನು ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ರಷಿಂಗ್ ಕಾರ್ಯ ಸ್ಥಗಿತದಿಂದ ಕಬ್ಬು ಒಣಗುತ್ತಿದೆ, ಕೂಡಲೇ ಕ್ರಷಿಂಗ್ ಆರಂಭ ಮಾಡುವಂತೆ ಒತ್ತಾಯಿಸಿದರು
ಜನರಲ್ ಮ್ಯಾನೇಜರ್ ಬೋರೇಗೌಡ ಮಾತ ನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಕಾರ್ಖಾನೆ ಸುಸ್ಥಿತಿಗೆ ತರಲು ಒಂದು ವಾರ ಕಾಲ ವಕಾಶ ಬೇಕಿದೆ. ಪ್ರಸ್ತುತ ಸರಾಸರಿ ಪ್ರತಿ ದಿನ 2500 ಟನ್ ಕಬ್ಬು ಅರೆಯುತ್ತಿದ್ದೇವೆ. ಕಾರ್ಖಾನೆ ಸುಸ್ಥಿತಿಗೆ ತಂದ ನಂತರ 3500 ಟನ್ ಕಬ್ಬು ಅರೆಯಲಾಗುವುದು ಎಂದರು.

Translate »