Tag: Mysore

ಚಾಮುಂಡಿಬೆಟ್ಟದಲ್ಲಿ ಭಕ್ತರಿಗೆ ತೊಡಕಾಗಿದ್ದ 97 ಮಳಿಗೆ ನೆಲಸಮ
ಮೈಸೂರು

ಚಾಮುಂಡಿಬೆಟ್ಟದಲ್ಲಿ ಭಕ್ತರಿಗೆ ತೊಡಕಾಗಿದ್ದ 97 ಮಳಿಗೆ ನೆಲಸಮ

September 13, 2019

ಮೈಸೂರು: ಚಾಮುಂಡಿಬೆಟ್ಟದ ದೇವಾಲಯ ರಸ್ತೆಯ ಎರಡೂ ಬದಿಯಲ್ಲಿದ್ದ 52 ಅನಧಿ ಕೃತ ಮಳಿಗೆ ಸೇರಿದಂತೆ 97 ಮಳಿಗೆಗಳನ್ನು ಜಿಲ್ಲಾಡಳಿತ ಬಿಗಿ ಪೊಲೀಸ್ ಭದ್ರತೆಯಲ್ಲಿ ಗುರುವಾರ ಬೆಳಿಗ್ಗೆ ತೆರವು ಗೊಳಿಸಿತು. ಬಸ್ ನಿಲ್ದಾಣ ಹಾಗೂ ಮಹಿಷಾಸುರ ಪ್ರತಿಮೆ ಯಿಂದ ದೇವಾಲಯಕ್ಕೆ ಹೋಗುವ ರಸ್ತೆಯಲ್ಲಿ ಗೂಡಂಗಡಿ ನಿರ್ಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದ ಗ್ರಾ.ಪಂನಿಂದ ಲೈಸನ್ಸ್ ಪಡೆದ 45 ಹಾಗೂ ಅನಧಿಕೃತವಾಗಿ ತಲೆ ಎತ್ತಿದ್ದ 52 ಮಳಿಗೆ ಸೇರಿದಂತೆ 97 ಮಳಿಗೆಗಳನ್ನು ಇಂದು ಬೆಳಿಗ್ಗೆ ತಹಶೀಲ್ದಾರ್ ಟಿ.ರಮೇಶ್ ಬಾಬು, ತಾ.ಪಂ ಇಒ ಕೃಷ್ಣ…

ಸೆ.26, 27 ಎರಡು ದಿನ ಬ್ಯಾಂಕ್ ಮುಷ್ಕರ
ಮೈಸೂರು

ಸೆ.26, 27 ಎರಡು ದಿನ ಬ್ಯಾಂಕ್ ಮುಷ್ಕರ

September 13, 2019

ಬೆಂಗಳೂರು,ಸೆ.12- 10 ರಾಷ್ಟ್ರೀ ಕೃತ ಬ್ಯಾಂಕ್‍ಗಳ ಮಹಾ ವಿಲೀನವನ್ನು ಖಂಡಿಸಿ ನಾಲ್ಕು ಬ್ಯಾಂಕ್ ನೌಕರರ ಸಂಘಗಳು ಸೆಪ್ಟೆಂಬರ್ 25ರ ಮಧ್ಯ ರಾತ್ರಿಯಿಂದ ಎರಡು ದಿನಗಳ ಕಾಲ ಮುಷ್ಕರ ಹಮ್ಮಿಕೊಂಡಿವೆ. ಈ ಕುರಿತು ಗುರುವಾರ ಸಂಘಟನೆಯ ಮುಖ್ಯ ಸ್ಥರು ಸ್ಪಷ್ಟಪಡಿಸಿದ್ದು, ಸೆಪ್ಟೆಂಬರ್ 25ರ ಮಧ್ಯರಾತ್ರಿಯಿಂದ ಎರಡು ದಿನಗಳ ಕಾಲ ಮುಷ್ಕರ ನಡೆಸಲಾಗುವುದು. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ. ನವೆಂಬರ್ ಎರಡನೇ ವಾರದಿಂದ ಅನಿರ್ದಿಷ್ಟಾವಧಿ ಮುಷ್ಕ ರಕ್ಕೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ. 10 ರಾಷ್ಟ್ರೀಕೃತ ಬ್ಯಾಂಕ್ ಗಳ…

ದಸರಾವನ್ನು ಜನಸಾಮಾನ್ಯರ ಹಬ್ಬವಾಗಿಸಲು ಸಹಕರಿಸಿ: ವಿ.ಸೋಮಣ್ಣ
ಮೈಸೂರು

ದಸರಾವನ್ನು ಜನಸಾಮಾನ್ಯರ ಹಬ್ಬವಾಗಿಸಲು ಸಹಕರಿಸಿ: ವಿ.ಸೋಮಣ್ಣ

September 13, 2019

ಮೈಸೂರು,ಸೆ.12(ಆರ್‍ಕೆ)- ವಿಶ್ವವಿಖ್ಯಾತ ದಸರಾ ವನ್ನು ಜನಸಾಮಾನ್ಯರ ಹಬ್ಬವಾಗಿಸಲು ಸಹಕರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಅಧಿಕಾರಿಗಳ ಸಹಕಾರ ಕೋರಿದ್ದಾರೆ. ಮುಡಾ ಕಚೇರಿ ಸಭಾಂಗಣದಲ್ಲಿ ಗುರುವಾರ ಮಧ್ಯಾಹ್ನ ದಸರಾ ಸಿದ್ಧತೆ ಕುರಿತಂತೆ ಸಿದ್ಧತಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಾಡಹಬ್ಬ ನಮ್ಮ ಮನೆಯ ಸ್ವತ್ತು ಆಗಬಾರದು. ದಸರಾ ಪಾಸ್ ಪಡೆದ ಜನಸಾಮಾನ್ಯರು, ವಿದೇಶಿ ಗರು ದಸರಾ ವೀಕ್ಷಣೆ ಮಾಡಲು ಅಧಿಕಾರಿಗಳು ಸಹಕರಿಸಬೇಕು. ಆ ಮೂಲಕ ಈ ಬಾರಿಯ ದಸರಾದಲ್ಲಿ ವಿಶ್ವಕ್ಕೆ ಹೊಸ ಸಂದೇಶ ರವಾನೆ ಯಾಗಬೇಕು…

ಆನೆ ತಾಲೀಮಿನ ವೇಳೆ ಪಕ್ಕಕ್ಕೆ ಬಂದು ಹಾರನ್ ಹೊಡೆಯಬೇಡಿ
ಮೈಸೂರು

ಆನೆ ತಾಲೀಮಿನ ವೇಳೆ ಪಕ್ಕಕ್ಕೆ ಬಂದು ಹಾರನ್ ಹೊಡೆಯಬೇಡಿ

September 13, 2019

ಮೈಸೂರು, ಸೆ.12(ಎಂಟಿವೈ)- ದಸರಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗಜಪಡೆಗೆ ಪೂರ್ಣ ಪ್ರಮಾಣದ ತಾಲೀಮು ಆರಂಭಿಸಲಾಗಿದ್ದು, ಮಾರ್ಗದುದ್ದಕ್ಕೂ ವಾಹನ ಸವಾರರು ಆನೆಗಳ ಸಮೀಪ ಬಂದು ಹಾರನ್ ಹೊಡೆಯದಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ಮಂಗಳವಾರ ನಗರ ಬಸ್ ನಿಲ್ದಾಣದ ಬಳಿ ಬಸ್ ಚಾಲಕ ಹಾಗೂ ದ್ವಿಚಕ್ರ ವಾಹನಗಳ ಸವಾ ರರು ತಾಲೀಮಿನಲ್ಲಿ ತೊಡಗಿದ್ದ ಆನೆಗಳ ಸಮೀಪ ಬಂದು ಜೋರಾಗಿ ಹಾರನ್ ಬಾರಿಸಿದ್ದರಿಂದ ಅರ್ಜುನ ಸೇರಿದಂತೆ ಮೂರು ಆನೆ ಅಡ್ಡಲಾಗಿ ನಿಂತವು. ಇದರಿಂದ ಕೆಲಕಾಲ ಆತಂಕದ ಪರಿ ಸ್ಥಿತಿ ಉಂಟಾಗಿತ್ತು. ಇದನ್ನು…

ಮೈಸೂರು ದಸರಾ: 75 ಕಿ.ಮೀ ರಸ್ತೆ, 91 ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ
ಮೈಸೂರು

ಮೈಸೂರು ದಸರಾ: 75 ಕಿ.ಮೀ ರಸ್ತೆ, 91 ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ

September 13, 2019

ಮೈಸೂರು,ಸೆ.12(ವೈಡಿಎಸ್)-ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಗುರು ವಾರ ನಡೆದ ದೀಪಾಲಂಕಾರ ಗುತ್ತಿಗೆದಾರರೊಂದಿ ಗಿನ ಸಭೆಯಲ್ಲಿ `ದಸರಾ ವಿದ್ಯುತ್ ದೀಪಾಲಂಕಾರ’ದ ಪೋಸ್ಟರ್ ಅನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬಿಡುಗಡೆಗೊಳಿಸಿದರು. ನಂತರ ಮಾತನಾಡಿ, ಮೈಸೂರು ದಸರಾ ಮಹೋತ್ಸವದಲ್ಲಿ ಪ್ರವಾಸಿಗರ ಕಣ್ಮನ ಸೆಳೆಯು ವಂತೆ ಈ ಬಾರಿ ಹೊಸ ವಿನ್ಯಾಸದೊಂದಿಗೆ ದೀಪಾ ಲಂಕಾರ ವ್ಯವಸ್ಥೆ ರೂಪಿಸಲಾಗಿದ್ದು, ಕಾಮಗಾರಿ ಯನ್ನು ಸೆ.25 ರೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ತಾಕೀತು ಮಾಡಿದರು. ಕಳೆದ ಬಾರಿ 54 ಕಿ.ಮೀ ರಸ್ತೆ ಹಾಗೂ 49…

ಮಕ್ಕಳ ಲೈಂಗಿಕ ಶೋಷಕರ ಪರ ವಕಾಲತು ಸಲ್ಲ: ಗುಬ್ಬಿಗೂಡು ರಮೇಶ್
ಮೈಸೂರು

ಮಕ್ಕಳ ಲೈಂಗಿಕ ಶೋಷಕರ ಪರ ವಕಾಲತು ಸಲ್ಲ: ಗುಬ್ಬಿಗೂಡು ರಮೇಶ್

September 13, 2019

ಮೈಸೂರು, ಸೆ.12(ಎಂಕೆ)- ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ, ಹಿಂಸಾ ಚಾರಗಳು ಇಂದಿಗೂ ನಡೆಯುತ್ತಲಿದ್ದು, ನಿಧಿ ಸಿಗಲಿದೆ ಎಂಬ ಮೂಢನಂಬಿಕೆ ಯಿಂದ ಬಾಗಲಕೋಟೆಯಲ್ಲಿ 6 ವರ್ಷದ ಬಾಲಕಿ ಮೇಲೆ ನಡೆದ ಕೃತ್ಯ ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ಸಂಸ್ಕøತಿ ಚಿಂತಕ ಗುಬ್ಬಿಗೂಡು ರಮೇಶ್ ವಿಷಾದಿಸಿದರು. ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ‘ಪ್ರಥಮ ಮೈಸೂರು ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ’ದ ಸಮಾರೋಪ ಸಮಾರಂಭ ದಲ್ಲಿ ಮಾತನಾಡಿದ ಅವರು, ಮಕ್ಕಳನ್ನು ಹೀನಕೃತ್ಯಗಳಿಗೆ ಬಳಸಿಕೊಳ್ಳುವವರ ಪರ ವಕೀಲರು ಯಾರೂ…

ಆದಿವಾಸಿಗಳ ಅಭಿವೃದ್ಧಿಗೆ ಆದ್ಯತೆ: ಸಚಿವ ವಿ.ಸೋಮಣ್ಣ
ಮೈಸೂರು

ಆದಿವಾಸಿಗಳ ಅಭಿವೃದ್ಧಿಗೆ ಆದ್ಯತೆ: ಸಚಿವ ವಿ.ಸೋಮಣ್ಣ

September 13, 2019

ಮೈಸೂರು,ಸೆ.12(ಆರ್‍ಕೆ)-ರಾಜ್ಯ ದಲ್ಲಿ ರುವ ಆದಿವಾಸಿ ಸಮುದಾಯಗಳಿಗೆÉ ಮೂಲ ಸೌಲಭ್ಯ ಒದಗಿಸಿ ಸಮಗ್ರ ಅಭಿವೃದ್ಧಿಪಡಿ ಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು. ಆದಿವಾಸಿ ಸಮನ್ವಯ ಮಂಚ್ ಹಾಗೂ ರಾಜ್ಯ ಮೂಲ ಆದಿವಾಸಿ ವೇದಿಕೆ ವತಿಯಿಂದ ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಇಂದು ಆರಂಭವಾದ ಎರಡು ದಿನಗಳ ಮೂಲ ಆದಿವಾಸಿ ಹಕ್ಕು ಮತ್ತು ಅಧಿ ಕಾರ ದಿವಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆದಿವಾಸಿ ಸಮುದಾಯದವರು ಸಾವಿ ರಾರು ವರ್ಷಗಳಿಂದ ಮುಖ್ಯವಾಹಿನಿಗೆ ಬರಲಾರದೆ ಸರ್ಕಾರದ ಯೋಜನೆಗಳಿಂದ…

ರಾಜಕೀಯ ದುರುದ್ದೇಶಪೂರಿತ ಆರೋಪಗಳ ಅಲ್ಲಗಳೆದ ವಿಜಯೇಂದ್ರ
ಮೈಸೂರು

ರಾಜಕೀಯ ದುರುದ್ದೇಶಪೂರಿತ ಆರೋಪಗಳ ಅಲ್ಲಗಳೆದ ವಿಜಯೇಂದ್ರ

September 13, 2019

ಮೈಸೂರು,ಸೆ.12-ತಾನು ಮುಖ್ಯಮಂತ್ರಿಗಳ ಪುತ್ರ ಎಂಬ ಒಂದೇ ಕಾರಣಕ್ಕಾಗಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ರಾಜಕೀಯ ದುರುದ್ದೇಶದಿಂದ ತನ್ನ ವಿರುದ್ಧ ಅಪಪ್ರಚಾರದಲ್ಲಿ ತೊಡಗಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರರೂ ಆದ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. `ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಒಂದು ವಿನಮ್ರ ನಿವೇದನೆ’ ಶೀರ್ಷಿಕೆಯಡಿ ಪತ್ರಿಕಾ ಪ್ರಕಟಣೆ ನೀಡಿ ರುವ ಅವರು, ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಮತ್ತು ನನ್ನ ರಾಜಕೀಯ ಏಳಿಗೆಗೆ ತಡೆಯೊಡ್ಡಬೇಕೆಂಬ ಷಡ್ಯಂತ್ರದಿಂದಾಗಿ ಸರ್ಕಾರದ ಆಡಳಿತ ಹಾಗೂ…

ಕುಕ್ಕರಹಳ್ಳಿ ಕೆರೆ ಕಾಲು ದಾರಿ ಈಗ ಕೆಸರುಮಯ
ಮೈಸೂರು

ಕುಕ್ಕರಹಳ್ಳಿ ಕೆರೆ ಕಾಲು ದಾರಿ ಈಗ ಕೆಸರುಮಯ

September 13, 2019

ಮೈಸೂರು, ಸೆ.12(ಆರ್‍ಕೆ)- ಮೈಸೂ ರಿನ ಕುಕ್ಕರಹಳ್ಳಿ ಕೆರೆ ಏರಿ ಮೇಲೆ ನೀವು ವಾಕ್ ಮಾಡಬೇಕೆಂದರೆ ಸ್ಪೋಟ್ರ್ಸ್ ಷೂ ಬದಲಾಗಿ ಗಮ್ ಬೂಟ್ ಧರಿಸಿ ಹೋಗ ಬೇಕು. ಏಕೆಂದರೆ ಕುಕ್ಕರಹಳ್ಳಿ ಕೆರೆ ಏರಿ ರಸ್ತೆಗೆ ಮಣ್ಣು ಹಾಕಿರುವುದರಿಂದ ಇದೀಗ ವಾಕಿಂಗ್ ಪಾತ್ ಕೆಸರುಮಯವಾಗಿದೆ. ಈ ಬಗ್ಗೆ ಇಂದು ‘ಮೈಸೂರು ಮಿತ್ರ’ ಕಚೇ ರಿಗೆ ದೂರವಾಣಿ ಮೂಲಕ ದೂರಿದ ಹಲವು ವಾಯುವಿಹಾರಿಗಳು, ದಸರಾ ಸಮೀಪಿ ಸುತ್ತಿದ್ದು, ಪ್ರವಾಸಿಗರು ಹಾಗೂ ಸಾರ್ವಜನಿ ಕರು ಕುಕ್ಕರಹಳ್ಳಿ ಕೆರೆಯತ್ತ ಬರುತ್ತಿರುವಾಗ ಪಾದಚಾರಿ ಮಾರ್ಗದಲ್ಲಿ ಮಣ್ಣು…

ಸಾಕ್ಷರರಾಗುತ್ತಿದ್ದೇವೆ ಮಾನವರಾಗುತ್ತಿಲ್ಲ… ಪದವೀಧರರಾಗುತ್ತಿದ್ದೇವೆ ಆದರ್ಶಗಳಿಲ್ಲ..
ಮೈಸೂರು

ಸಾಕ್ಷರರಾಗುತ್ತಿದ್ದೇವೆ ಮಾನವರಾಗುತ್ತಿಲ್ಲ… ಪದವೀಧರರಾಗುತ್ತಿದ್ದೇವೆ ಆದರ್ಶಗಳಿಲ್ಲ..

September 13, 2019

ಮೈಸೂರು: ಯಾವುದೇ ತಿರುಳಿಲ್ಲದ ನಮ್ಮ ಬದುಕಿನಲ್ಲಿ ಮಾನವೀ ಯತೆ ಮರೆತು ಹೆಸರಿಗಷ್ಟೇ ಮಾನವರಾಗಿ ಉಳಿದಿದ್ದೇವೆ. ಸಾಕ್ಷರರಾಗುತ್ತಿದ್ದೇವೆಯೇ ಹೊರತು ಮಾನವರಾಗುತ್ತಿಲ್ಲ. ಪದವೀ ಧರರಾಗುತ್ತಿದ್ದರೂ ಆದರ್ಶಗಳಿಲ್ಲ… ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಗುರುವಾರ ಮೈಸೂರಿನ ಕಲಾಮಂದಿರದ ಎಂ.ಎಸ್. ಪುಟ್ಟಣ್ಣ ವೇದಿಕೆಯಲ್ಲಿ ನಡೆದ ಮೈಸೂರು ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇ ಳನದಲ್ಲಿ ಸಮ್ಮೇಳನಾಧ್ಯಕ್ಷ ಎಂ.ಎಸ್. ಅರ್ಜುನ್ ಬೇಸರದ ನುಡಿಗಳಿವು. ಮನುಷ್ಯ-ಮನುಷ್ಯನ ನಡುವೆ ಗೋಡೆ ಬಂದಿದೆ. ಗೋಡೆಯ ಬದಲಿಗೆ ಸೇತುವೆ ಇರಬೇಕಿತ್ತು. ಹಿರಿಯರು ಹೇಳಿದ ಸಂದೇಶ ಗಳನ್ನು ನಮ್ಮ…

1 173 174 175 176 177 330
Translate »