ಮೈಸೂರು: ಬಿಜೆಪಿ ಯುವ ಮೋರ್ಚಾ ಮೈಮರೆತರೆ, ಕೇಂದ್ರದ ಅಧಿಕಾರದ ಚುಕ್ಕಾಣಿ ಮತ್ತೆ ದುಷ್ಟಕೂಟದ ವಶವಾಗುತ್ತದೆ. ಇದರಿಂದ ಕಳೆದ ಐದು ವರ್ಷಗಳಲ್ಲಿ ವಿಶ್ವ ಮಟ್ಟದಲ್ಲಿ ಭಾರತ ಸಂಪಾದಿಸಿರುವ ಗೌರವ ಕುಸಿಯುತ್ತದೆ ಎಂದು ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ತಿಳಿಸಿದರು. ಯುವ ಮೋರ್ಚಾ ಕಾರ್ಯಕರ್ತರ ಸಮಾ ವೇಶದಲ್ಲಿ ಮಾತನಾಡುತ್ತ, 2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಅಧಿ ಕಾರದಲ್ಲಿತ್ತು. ಆ ವರ್ಷ ನಡೆದ ಚುನಾವಣೆಯಲ್ಲಿ ಯುವ ಮೋರ್ಚಾ ಮೈಮರೆತ ಪರಿಣಾಮ ಅಧಿ ಕಾರ ಕಳೆದುಕೊಳ್ಳಬೇಕಾಯಿತು. ಈ ಬಾರಿ ಹಾಗಾಗಬಾರದು. 2014ರ…
ಪತ್ರಕರ್ತರ ರಾಜ್ಯ ಸಮ್ಮೇಳನದ ಪ್ರಚಾರಕ್ಕೆ ಹೊರಟಿದೆ ಮಾಧ್ಯಮ ರಥ
February 26, 2019ಮೈಸೂರು: ಮೈಸೂರು ಜಿಲ್ಲೆ ಸುತ್ತೂರಿನಲ್ಲಿ ಮಾ.1 ಮತ್ತು 2ರಂದು ನಡೆಯಲಿರುವ 34ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ಪ್ರಚಾರಕ್ಕಾಗಿ ಸೋಮವಾರ `ಮಾಧ್ಯಮ ರಥ’ಕ್ಕೆ ಸಂಸದರಾದ ಆರ್. ಧ್ರುವನಾರಾಯಣ್, ಪ್ರತಾಪ್ ಸಿಂಹ ಚಾಲನೆ ನೀಡಿದರು. ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವ ಸ್ಥಾನದ ಎದುರು ಸಮ್ಮೇಳನದ ಪ್ರಚಾರ ರಥಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸಮಾಜದ ಅಭದ್ರತೆ-ಅನ್ಯಾಯಗಳನ್ನು ಬೆಳ ಕಿಗೆ ತರುವ ಪತ್ರಕರ್ತರು ಮಾತ್ರ ಅಭದ್ರತೆ ಯಲ್ಲೇ ಕೆಲಸ ಮಾಡುವ ಸನ್ನಿವೇಶವಿದೆ. ಇಂತಹ…
ವಿದ್ಯಾರ್ಥಿನಿ ಹತ್ಯೆ ಯತ್ನ: ಯುವರಾಜ ಕಾಲೇಜು ವಿದ್ಯಾರ್ಥಿ ಅಮಾನತಿಗೆ ನಿರ್ಧಾರ
February 26, 2019ಮೈಸೂರು: ಪ್ರೀತಿ ನಿವೇದನೆಯನ್ನು ತಿರಸ್ಕರಿಸಿದ್ದ ವಿದ್ಯಾ ರ್ಥಿನಿಗೆ ಕಟ್ಟರ್ ಬ್ಲೇಡ್ನಿಂದ ಕೊಯ್ದು ಹತ್ಯೆಗೈಯ್ಯಲು ಯತ್ನಿಸಿದ್ದ ಯುವ ರಾಜು ಕಾಲೇಜು ವಿದ್ಯಾರ್ಥಿ ರೋಹಿತ್ (21) ಎಂಬಾತನನ್ನು ಕಾಲೇಜಿನಿಂದ ಅಮಾನತು ಮಾಡಲು ನಿರ್ಧರಿಸಲಾ ಗಿದೆ. ಗುಂಡ್ಲುಪೇಟೆಯ ನಿವಾಸಿಯಾದ ರೋಹಿತ್, ಯುವರಾಜ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿ ಯಾಗಿದ್ದು, ಫೆ.15ರಂದು ಈತನ ಜೊತೆ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಪ್ರೀತಿಸುವಂತೆ ಒತ್ತಾಯಿಸಿದ್ದ. ಇದಕ್ಕೆ ವಿದ್ಯಾರ್ಥಿನಿ ನಿರಾಕರಿಸಿದ್ದರಿಂದ ತರಗತಿ ಯ¯್ಲÉೀ ಹತ್ಯೆಗೈಯ್ಯಲು ಯತ್ನಿಸಿದ್ದಲ್ಲದೆ, ರಕ್ಷಿಸಲು ಬಂದ ಮತ್ತೊಬ್ಬ ವಿದ್ಯಾ ರ್ಥಿನಿ ಕೈಗೂ ಗಾಯ ಮಾಡಿದ್ದ….
ಬೇಲೂರು ಸೇರಿದಂತೆ ನಾಲ್ಕು ಪ್ರವಾಸಿ ತಾಣದಲ್ಲಿ ತ್ರೀ-ಸ್ಟಾರ್ ಹೋಟೆಲ್ ನಿರ್ಮಾಣ
February 26, 2019ಮೈಸೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿ ಯಿಂದ ರಾಜ್ಯದ ನಾಲ್ಕು ಪ್ರವಾಸಿ ತಾಣಗಳಲ್ಲಿ ತ್ರೀ-ಸ್ಟಾರ್ ಹೋಟೆಲ್ ಗಳ ನಿರ್ಮಾಣಕ್ಕೆ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ. ಮಹೇಶ್ ಅನುಮೋದಿಸಿದ್ದಾರೆ. ಹಾಸನ ಜಿಲ್ಲೆ ಬೇಲೂರಿನಲ್ಲಿ 20.71 ಕೋಟಿ ರೂ., ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ 18.32 ಕೋಟಿ ರೂ., ವಿಜಯಪುರದಲ್ಲಿ 16.74 ಕೋಟಿ ರೂ. ಹಾಗೂ ಹಂಪಿಯಲ್ಲಿ 28.20 ಕೋಟಿ ರೂ. ಸೇರಿದಂತೆ ಒಟ್ಟು 84 ಕೋಟಿ ಅಂದಾಜು ಮೊತ್ತದಲ್ಲಿ ಹೋಟೆಲ್ಗಳ ನಿರ್ಮಾಣಕ್ಕೆ ಸಮಗ್ರ ಯೋಜನಾ ಸಿದ್ಧಪಡಿಸಿ…
ಮೂರು ವಾರ್ಡ್ಗಳಲ್ಲಿ 1.18 ಕೋಟಿ ರೂ. ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಎಲ್.ನಾಗೇಂದ್ರ
February 26, 2019ಮೈಸೂರು: ಚಾಮರಾಜ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.2, 20, 22ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಲ್. ನಾಗೇಂದ್ರ ಚಾಲನೆ ನೀಡಿದರು. ವಾರ್ಡ್ ನಂ.2ರ ಮಂಚೇಗೌಡನ ಕೊಪ್ಪಲಿನಲ್ಲಿ ಶಾಸಕರು ಈ ಹಿಂದೆ ಪಾದ ಯಾತ್ರೆ ನಡೆಸುವ ವೇಳೆ ರಸ್ತೆ ಹಾಗೂ ಚರಂಡಿ ದುರಸ್ತಿಯಾಗದಿರುವ ಬಗ್ಗೆ ನಾಗರಿ ಕರು ದೂರು ನೀಡಿದ್ದರು. ಇದಕ್ಕೆ ಸ್ಪಂದಿ ಸಿದ ಶಾಸಕರು, 50 ಲಕ್ಷ ರೂ. ವೆಚ್ಚದಲ್ಲಿ ಆಯ್ದ ರಸ್ತೆಗಳ ಡಾಂಬರೀಕರಣ, ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. 20ನೇ ವಾರ್ಡ್ನಲ್ಲಿ ವಿಜಯನಗರದ…
ಪ್ರಧಾನಿ ಮೋದಿಯಿಂದ ಪೌರಕಾರ್ಮಿಕರ ಪಾದ ಪೂಜೆ: ದಸಂಸ ಅಭಿನಂದನೆ
February 26, 2019ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಕುಂಭಮೇಳದಲ್ಲಿ ಸ್ವಚ್ಛತೆ ಕಾಪಾಡಿದ ಪೌರಕಾರ್ಮಿಕರ ಪಾದ ತೊಳೆದು, ಗೌರವಿಸಿದ ಸಂಗತಿ, ಶೋಷಿತ ಸಮುದಾಯದವರ ಆತ್ಮಗೌರವ ಹೆಚ್ಚಿಸಿದೆ ಎಂದು ಮೈಸೂರು ಜಿಲ್ಲಾ ದಲಿತ ಸಂಘರ್ಷ ಸಮಿತಿ ಅಭಿಪ್ರಾಯಿಸಿದೆ. ಶತಮಾನಗಳಿಂದ ಜಾತಿ, ಅಸ್ಪøಶ್ಯತೆ ಸಂಕೋಲೆಗಳಲ್ಲಿ ಸಿಲುಕಿ ಅವಮಾನ ಅನುಭವಿಸಿರುವ ಹಾಗೂ ಹಂಗಿನ ಜೀವನ ನಡೆಸುತ್ತಿರುವ ದೇಶದ ದಲಿತ ಸಮುದಾಯದಲ್ಲಿ, ಪ್ರಧಾನಿ ಮೋದಿ ಅವರ ಈ ಒಂದು ಕಾರ್ಯ ರೋಮಾಂಚನ ಉಂಟು ಮಾಡಿದೆ. ಪೌರಕಾರ್ಮಿಕರ ಪಾದ ತೊಳೆದು, ಪೂಜೆ ಮಾಡಿರುವುದು 12ನೇ…
ಸರ್ಕಾರಿ ಖರಾಬು ಜಮೀನು ಒತ್ತುವರಿ ತೆರವಿಗೆ ಒತ್ತಾಯ
February 26, 2019ಹನಗೋಡು: ಹೋಬಳಿಯ ದೊಡ್ಡಹೆಜ್ಜೂರು ಗ್ರಾಪಂ ವ್ಯಾಪ್ತಿಯ ಈರತಯ್ಯನಕೊಪ್ಪಲಿನ ಸರ್ಕಾರಿ ಖರಾಬು ಜಮೀನನ್ನು ಒತ್ತುವರಿ ಮಾಡಿ, ಪ್ರಭಾವಿ ರೈತರೊಬ್ಬರು ಶೆಡ್ ನಿರ್ಮಿಸಿ ಕೊಂಡಿದ್ದು, ಕೂಡಲೇ ಒತ್ತುವರಿ ತೆರವುಗೊಳಿಸಿ ಗ್ರಾಮದ ಸಭೆ ಸಮಾರಂಭಗಳಿಗೆ ಭೂಮಿ ಮೀಸಲಿಡುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ತಾಲೂಕು ಆಡಳಿತಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಸ್ಥಳದಲ್ಲಿ ಜಮಾಯಿಸಿದ್ದ ಗ್ರಾಮಸ್ಥರು ಮಾತನಾಡಿ, ಈರತಯ್ಯನ ಕೊಪ್ಪಲು ಗ್ರಾಮದಲ್ಲಿ 25 ಕುಟುಂಬಗಳು ವಾಸಿಸುತ್ತಿದ್ದು, ಅನಾದಿ ಕಾಲದಿಂದಲೂ ಗ್ರಾಮದ ಮಧ್ಯಭಾಗದಲ್ಲೇ ಇರುವ ಸುಮಾರು ಒಂದು ಎಕರೆ ಸರ್ಕಾರಿ ಭೂಮಿಯಲ್ಲಿ…
ಸುತ್ತೂರು ಶ್ರೀ ಕ್ಷೇತ್ರದಲ್ಲಿ ಮಾ.1, 2ರಂದು ಪತ್ರಕರ್ತರ 34ನೇ ರಾಜ್ಯ ಸಮ್ಮೇಳನ
February 26, 2019ಮಾಧ್ಯಮ ಪ್ರಚಾರ ರಥಕ್ಕೆ ಅದ್ಧೂರಿ ಸ್ವಾಗತ ಭೇರ್ಯ: ಜಿಲ್ಲೆಯ ಸುತ್ತೂರು ಶ್ರೀಕ್ಷೇತ್ರದಲ್ಲಿ ಮಾ.1 ಮತ್ತು 2ರಂದು ನಡೆ ಯುವ ಪತ್ರಕರ್ತರ 34ನೇ ರಾಜ್ಯ ಸಮ್ಮೇ ಳನದ ಮಾಧ್ಯಮ ಪ್ರಚಾರ ರಥವನ್ನು ಭೇರ್ಯ ಗ್ರಾಮದ ಗಾಂಧಿ ವೃತ್ತದಲ್ಲಿ ಪತ್ರಕರ್ತರು ಸೇರಿದಂತೆ ವಿವಿಧ ಸಂಘ-ಸಂಸ್ಥೆ, ಸರ್ಕಾರಿ ಇಲಾಖೆ ಅಧಿಕಾರಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಈ ವೇಳೆ ಉಪತಹಶೀಲ್ದಾರ್ ಯಧು ಗಿರೀಶ್ ಮಾತನಾಡಿ, ಜಿಲ್ಲೆಯಲ್ಲಿ ಪತ್ರ ಕರ್ತರ ರಾಜ್ಯ ಸಮ್ಮೇಳನ ನಡೆಯುತ್ತಿ ರುವುದು ಸಂತಸದ ವಿಚಾರವಾಗಿದೆ. ಸರ್ಕಾ ರದ ಹಲವಾರು ಯೋಜನೆಗಳ ಮಾಹಿತಿ…
ಲಕ್ಷಾಂತರ ರೂ. ವಂಚನೆ: ವ್ಯಕ್ತಿ ವಿರುದ್ಧ ಪ್ರಕರಣ ದಾಖಲು
February 26, 2019ಮೈಸೂರು: ಪಾಲುದಾರಿಕೆಯಲ್ಲಿ ನಿವೇಶನ ಖರೀದಿಸಿ, ನಂತರ ಅದನ್ನು ಹೆಚ್ಚು ಮೌಲ್ಯಕ್ಕೆ ಮಾರಾಟ ಮಾಡಿ, ಹಣ ಹಂಚಿಕೊಳ್ಳೋಣವೆಂದು ನಂಬಿಸಿ ಸುಮಾರು 21 ಲಕ್ಷ ರೂ. ಹಣ ವಂಚಿಸಿದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಮೈಸೂರಿನ ಸರಸ್ವತಿಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ. ಮೈಸೂರಿನ ಬೋಗಾದಿ ನಿವಾಸಿ ಎಸ್.ನಾಗರಾಜು ಅವರು, ಬಿ.ಆರ್.ಆನಂದ್ ಕುಮಾರ್ ವಿರುದ್ಧ ದೂರು ನೀಡಿದ್ದಾರೆ. ದುಬೈನಲ್ಲಿ ನೆಲೆಸಿರುವ ತಮ್ಮ ಪುತ್ರ ಎಸ್.ಎನ್.ಸುಹಾಸ್, ಈ ಹಿಂದೆ ಆನಂದ್ಕುಮಾರ್ ಅವರ ವಿದ್ಯಾರ್ಥಿ. ಪಾಲುದಾರಿಕೆ ಯಲ್ಲಿ ನಿವೇಶನ ಖರೀದಿಸಲೆಂದು 4 ವರ್ಷದ ಹಿಂದೆ ತಮ್ಮ…
ತಿಂಗಳಲ್ಲಿ ವಿಜಯನಗರ, ಯಾದವಗಿರಿ ಜಲಸಂಗ್ರಹಾಗಾರ ಕಾಮಗಾರಿ ಪೂರ್ಣಗೊಳಿಸಿ
February 25, 2019ಮೈಸೂರು: ಮೈಸೂ ರಿನ ಯಾದವಗಿರಿ ಮತ್ತು ವಿಜಯನಗರ ದಲ್ಲಿ ನಿರ್ಮಿಸುತ್ತಿರುವ ಜಲಸಂಗ್ರಹಾಗಾರ ಗಳ ಕಾಮಗಾರಿಗಳನ್ನು ಮಾರ್ಚ್ ಮಾಹೆ ಯೊಳಗಾಗಿ ಪೂರ್ಣಗೊಳಿಸುವಂತೆ ಸಂಸದ ಪ್ರತಾಪ್ ಸಿಂಹ, ಇಂದಿಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 4ಪ್ರಗತಿ ಹಂತದಲ್ಲಿರುವ ಜಲಸಂಗ್ರಹಾ ಗಾರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ತ್ವರಿತಗತಿ ಯಲ್ಲಿ ಕೆಲಸ ಮಾಡಿಸಿ, ಎರಡೂ ಕಡೆಯ ಜಲ ಸಂಗ್ರಹಾಗಾರಗಳ ಕಾಮಗಾರಿ ಯನ್ನು ಪೂರ್ಣಗೊಳಿಸಿ ಜನರಿಗೆ ದಿನದ 24 ಗಂಟೆಯೂ ನೀರು ಪೂರೈಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಮೃತ…