ಮಂಡ್ಯ, ಫೆ.೧೬(ಮೋಹನ್ರಾಜ್)- ಮಂಡ್ಯ ಜಿಲ್ಲೆಯ ಹಿರಿಯ ರಾಜಕೀಯ ಮುತ್ಸದ್ದಿ ಶಿಕ್ಷಣ ತಜ್ಞ, ಸಹಕಾರಿ ಧುರೀಣ ಹಾಗೂ ಮಾಜಿ ಶಾಸಕ ಡಾ.ಹೆಚ್.ಡಿ. ಚೌಡಯ್ಯ(೯೪) ತಡರಾತ್ರಿ ೨.೩೦ರಲ್ಲಿ ಸ್ವಗ್ರಾಮ ತಾಲೂಕಿನ ಹೊಳಲು ಗ್ರಾಮ ದಲ್ಲಿ ವಿಧಿವಶರಾದರು. ಇತ್ತೀಚೆಗೆ ಅವರ ಪತ್ನಿ ದೊಡ್ಡಲಿಂಗಮ್ಮನವರ ಅಗಲಿಕೆಯ ನಂತರ ತೀವ್ರವಾಗಿ ನೊಂದಿದ್ದ ಹೆಚ್.ಡಿ. ಚೌಡಯ್ಯ ಅವರು ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ. ೧೯೨೮ರಲ್ಲಿ ಮಂಡ್ಯ ತಾಲೂ ಕಿನ ಹೊಳಲು ಗ್ರಾಮದಲ್ಲಿ ಜನಿಸಿದ ಚೌಡಯ್ಯ, ಬಿಎಸ್ಸಿ (ಅಗ್ರಿ) ಪದವೀಧರ…
ಮಹಿಳೆ, ನಾಲ್ವರು ಮಕ್ಕಳೂ ಸೇರಿ ಒಂದೇ ಕುಟುಂಬದ ಐವರ ಭೀಕರ ಹತ್ಯೆ
February 7, 2022ಶ್ರೀರಂಗಪಟ್ಟಣ, ಫೆ.6(ವಿನಯ್ ಕಾರೇ ಕುರ)-ಶ್ರೀರಂಗಪಟ್ಟಣ ತಾಲೂಕು ಕೆಆರ್ಎಸ್ ಗ್ರಾಮದಲ್ಲಿ ಶನಿವಾರ ತಡರಾತ್ರಿ ಮಹಿಳೆ ಹಾಗೂ ನಾಲ್ವರು ಮಕ್ಕಳು ಸೇರಿ ದಂತೆ ಒಂದೇ ಕುಟುಂಬದ ಐವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಗ್ರಾಮದ ಬಜಾರ್ ಲೈನ್ ಬಡಾ ವಣೆಯ ಗಂಗಾರಾಮ್ ಎಂಬುವರ ಪತ್ನಿ ಲಕ್ಷ್ಮಿ(30), ಮಕ್ಕಳಾದ ರಾಜು(10), ಕೋಮಲ್(7), ಕುನಾಲ್(4) ಮತ್ತು ಗಂಗಾರಾಮ್ ಅವರ ಸಹೋದರ ಗಣೇಶ್ ಅವರ ಮಗ ಗೋವಿಂದ(8) ಹತ್ಯೆಗೀಡಾದವರಾಗಿದ್ದಾರೆ. ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಗಂಗಾ ರಾಮ್, ತನ್ನ ಸಹೋದರ ಗಣೇಶ್ ಮತ್ತು ಅತ್ತಿಗೆ ಚಂಪಾಡಿ…
ಕುಡಿಯುವ ನೀರಿನ ಯೋಜನೆ ಅಪೂರ್ಣ
February 6, 2022ಮಳವಳ್ಳಿ, ಫೆ.5(ಮೋಹನ್ರಾಜ್)-ಪುರಸಭೆಯ 24×7 ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಲೋಕಾ ಯುಕ್ತ ಅಥವಾ ಸಿಬಿಐ ತನಿಖೆಗೆ ಒತ್ತಾಯಿಸಿ ಸದಸ್ಯರು ಹೋರಾಟ ನಡೆಸಿದ ಘಟನೆ ಪುರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ನಡೆಯಿತು. ಪಟ್ಟಣದ ಪುರಸಭೆಯ ಸಭಾಂ ಗಣದಲ್ಲಿ ಅಧ್ಯಕ್ಷೆ ರಾಧಾ ನಾಗರಾಜು ಅಧ್ಯಕ್ಷತೆ ಹಾಗೂ ಶಾಸಕ ಡಾ.ಕೆ.ಅನ್ನ ದಾನಿ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ಸಭೆಯು ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು 14ನೇ ಹಣಕಾಸಿನ ಯೋಜನೆಯಲ್ಲಿ ಬಿಜೆಪಿ ಸದಸ್ಯರ ವಾರ್ಡ್ ಗಳಿಗೆ ಬರೀ 1.5 ಲಕ್ಷ ಅನುದಾನ ನೀಡಿದ್ದು, ಜೆಡಿಎಸ್ ಸದಸ್ಯರ…
ರಾಸಾಯನಿಕ ಸೋರಿಕೆಯಿಂದ ಬೆಳೆ ನಾಶ ಪ್ರಕರಣ ಸ್ಥಳ ಪರಿಶೀಲನೆ ನಡೆಸಿದ ಶಾಸಕ ಎಂ.ಶ್ರೀನಿವಾಸ್
February 6, 2022ಮಂಡ್ಯ,ಫೆ.5(ಮೋಹನ್ರಾಜ್)- ತಾಲೂಕಿನ ಬಸರಾಳು ಹೋಬಳಿಯ ಕಾರೇಕಟ್ಟೆ ಗ್ರಾಮದ ಸಮೀಪ ಕೀರ್ತಿ ಇಂಡ ಸ್ಟ್ರೀಸ್ ಹೆಸರಿನ ರಾಸಾಯನಿಕಗಳ ತಯಾ ರಿಕಾ ಕಾರ್ಖಾನೆಯಲ್ಲಿ ಸಲ್ಫೂರಿಕ್ ಆಸಿಡ್ ಸೋರಿಕೆಯಿಂದ ಉಂಟಾದ ದುರಂತದಿಂ ದಾಗಿ ಸುತ್ತಮುತ್ತಲಿನ 10 ಎಕರೆ ಪ್ರದೇಶ ದಲ್ಲಿ ಬೆಳೆ ನಾಶವಾಗಿದ್ದ ಹಿನ್ನೆಲೆಯಲ್ಲಿ ಶಾಸಕ ಎಂ.ಶ್ರೀನಿವಾಸ್ ಅಧಿಕಾರಿಗಳೊಂ ದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಕಾರ್ಖಾ ನೆಯ ರಾಸಾಯನಿಕ ಸೋರಿಕೆಯಿಂದಾಗಿ ತೆಂಗು, ಟೊಮ್ಯಾಟೋ, ರಾಗಿ ಮುಂತಾದ ಬೆಳೆ ನಾಶವಾಗಿವೆ. ಇದಕ್ಕೆ ಹೊಂದಿ ಕೊಂಡಂತಿರುವ ಬಾಳೇನಹಳ್ಳಿ ಅರಣ್ಯ…
ಪಿಡಿಓ ವಿರುದ್ಧ ಅಗಸರಹಳ್ಳಿ ಗ್ರಾಮಸ್ಥರ ಪ್ರತಿಭಟನೆ
February 6, 2022ಕೆ.ಆರ್.ಪೇಟೆ, ಫೆ.5-ಮೀನು ಸಾಕಾ ಣಿಕೆಗೆ ಈಗಾಗಲೇ ನಿಯಮಾನುಸಾರ ಹರಾಜಾಗಿರುವ ಅಗಸರಹಳ್ಳಿ ಕೆರೆಯನ್ನು ಮರು ಹರಾಜಿಗೆ ಒಳಪಡಿಸಿರುವ ಪಿಡಿಓ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ತಾಲೂಕಿನ ಅಗಸರಹಳ್ಳಿ ಗ್ರಾಮಸ್ಥರು ತಾಲೂಕು ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಅಗಸರಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ದೇವರಾಜು ಮಾತನಾಡಿ, ತಾಲೂಕಿನ ಮುರು ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಅಗಸರಹಳ್ಳಿ ಕೆರೆಯಲ್ಲಿ ಅಗಸರಹಳ್ಳಿ ಗ್ರಾಮದ ವೆಂಕಟೇಶ್ ಬಿನ್ ವೆಂಕಟೇಗೌಡ ಅವರಿಗೆ 2016 ರ ಜ. 22ರಲ್ಲಿ ಹರಾಜು ಮೂಲಕ 5 ವರ್ಷಗಳ ಅವಧಿಗೆ…
ಪಾಂಡವಪುರದಲ್ಲಿ ಕೆಆರ್ಎಸ್ 9 ಕಾರ್ಯಕರ್ತರ ಬಂಧನ
January 19, 2022ಪಾಂಡವಪುರ,ಜ.18-ತಾಲೂಕು ಕಚೇರಿಯಲ್ಲಿ ಭ್ರಷ್ಟಾ ಚಾರ ನಡೆಯುತ್ತಿದೆ ಎಂದು ಕೋವೀಡ್ ನಿಯಮಾವಳಿ ಧಿಕ್ಕರಿಸಿ ದಾಂಧÀಲೆ ನಡೆಸಿದ ಆರೋಪದ ಮೇಲೆ ಕರ್ನಾಟಕ ರಕ್ಷಣಾ ಸಮಿತಿ(ಕೆಆರ್ಎಸ್) ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ತಾಲೂಕು ಕಚೇರಿಗೆ ನುಗ್ಗಿದ ಕೆಆರ್ಎಸ್ ಪಕ್ಷದ ಕಾರ್ಯಕರ್ತರು ಅಧಿಕಾರಿಗಳನ್ನು ನಿಂದಿಸಿ, ನೂಕಾಟ -ತಳ್ಳಾಟದ ಮೂಲಕ ಅವರು ಕರ್ತವ್ಯಕ್ಕೆ ಅಡ್ಡಿಪಡಿಸಿ ದರು ಎಂದು ದೂರಲಾಗಿದೆ. ಈ ಸಂಬಂಧ 9 ಮಂದಿ ಕಾರ್ಯಕರ್ತರನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ. ಪಕ್ಷದ ಕಾರ್ಯಕರ್ತರಾದ ಲಿಂಗೇಗೌಡ, ವಿಶ್ವನಾಥ್, ಉಮೇಶ್ಗೌಡ, ಮಹೇಂದ್ರಕುಮಾರ್, ಪ್ರಕಾಶ್, ರಮೇಶ್ ಗೌಡ,…
ಖಾಸಗಿ ಬಸ್-ಕಾರು ಮುಖಾಮುಖಿ ಡಿಕ್ಕಿ ಕೊಡಗಿನ ನವದಂಪತಿ ಸೇರಿ ಮೂವರ ದುರ್ಮರಣ
January 3, 2022ನಾಗಮಂಗಲ,ಜ.2(ಮಹೇಶ್/ಮೋಹನ್)- ಕಾರು ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನವದಂಪತಿ ಸೇರಿದಂತೆ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಕೆಂಪನಕೊಪ್ಪಲು ಗೇಟ್ ಬಳಿ ಇಂದು ಮಧ್ಯಾಹ್ನ ಸಂಭವಿಸಿದೆ. ಮೃತಪಟ್ಟವರನ್ನು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕುಂದಳ್ಳಿ ಗ್ರಾಮದವರಾಗಿದ್ದು, ಹಾಲಿ ಮೈಸೂರಿನಲ್ಲಿ ವಾಸವಿದ್ದ ನಿವೃತ್ತ ಶಿಕ್ಷಕಿ ತಂಗಮ್ಮ(65), ಇವರ ಮಗ ಸುದೀಪ್(30), ಸೊಸೆ ಶ್ರೀಜಾ (23) ಎಂದು ಗುರುತಿಸಲಾಗಿದೆ. ಇವರ ಸಂಬಂಧಿ ಶ್ರೇಯಾ ಎಂಬ ಬಾಲಕಿ ಗಂಭೀರ…
ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳಿಂದ ಅದ್ಧೂರಿ ಶೋಭಾಯಾತ್ರೆ
December 17, 2021ಶ್ರೀರಂಗಪಟ್ಟಣ, ಡಿ.16(ವಿನಯ್ ಕಾರೇಕುರ)- ಹನುಮ ಜಯಂತಿ ಅಂಗವಾಗಿ ಇಂದು ಪಟ್ಟಣದಲ್ಲಿ ಹನುಮಮಾಲೆ ಧರಿಸಿದ ಸಾವಿರಾರು ಮಾಲಾಧಾರಿಗಳು ಹನುಮ ಸಂಕೀರ್ತನಾ ಶೋಭಾಯಾತ್ರೆ ಹಮ್ಮಿಕೊಂಡಿದ್ದರು. ಪಟ್ಟಣದ ಹೊರವಲಯದಲ್ಲಿರುವ ಗಂಜಾಂ ಶ್ರೀ ನಿಮಿಷಾಂಬ ದೇವಸ್ಥಾನ ಬಳಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ 10 ಗಂಟೆಗೆ ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ವಿಶೇಷ ಪೂಜೆ ಸಲ್ಲಿಸಿ ಆಂಜನೇಯಸ್ವಾಮಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು. ಈ ವೇಳೆ ಡಾ.ಭಾನುಪ್ರಕಾಶ್ ಶರ್ಮಾ ಮಾತನಾಡಿ, ಭಾರತದ ಸಂಸ್ಕøತಿ ಮತ್ತು ಪರಂಪರೆಯನ್ನು ಬಿಂಬಿಸಲು ಸಂಕೀರ್ತನಾ ಯಾತ್ರೆ, ಶೋಭಯಾತ್ರೆ, ಭಜನೆ…
`ಪ್ರೀತಿ ಅಮರ’ ಸಂದೇಶ ಸಾರಿದ ಹಿರಿಯ ಜೀವಗಳ `ಬದುಕಿನ ಬಂಧನ’
December 3, 2021ಮೇಲುಕೋಟೆ, ಡಿ.2- ಪ್ರೀತಿ… ಎಂಬುದೇ ಭಾವನೆಗಳು ಬೆಸೆಯುವ ಒಂದು ಭಾವ… ಇದಕ್ಕೆ ವಯಸ್ಸಿನ ಭೇದವಿಲ್ಲ. ಈ ಪ್ರೀತಿಯು ಹದಿಹರೆಯರಲ್ಲಿ ಹೆಚ್ಚಾಗಿ ಪ್ರೇಮಲೋಕದ ಪ್ರಣಯಿಗಳಾಗಿರುತ್ತಾರೆ. ಆದರೆ ಮನುಷ್ಯನ ಆಂತರ್ಯದಲ್ಲಿ ಈ ಪ್ರೀತಿಯ ಭಾವನೆ ಗಂಡು-ಹೆಣ್ಣು, ವಯಸ್ಸಿನ ಭೇದವನ್ನು ಮೀರಿ ಬದುಕಿನ ಹಾದಿಯಲ್ಲಿ ಹೂನಗೆ ಹಾಸಿ ಬದುಕನ್ನು ಉಲ್ಲಾಸಗೊಳಿಸುತ್ತದೆ. ಪ್ರಸ್ತುತ ದಿನಗಳಲ್ಲಿ ಗಂಡು-ಹೆಣ್ಣಿನ ದೈಹಿಕ ಬಯಕೆಯನ್ನೇ ಪ್ರೀತಿ ಎಂದು ಭಾವಿಸಿರುವ ಜಗತ್ತಿಗೆ ಬದುಕಿನಾಸರೆಯ ಅನುಬಂಧದ ಪಾಠ ಹೇಳಿದೆ ಒಂದು ಹಿರಿಯ ಜೋಡಿ. ನೈಜ ಪ್ರೀತಿಗೆ ವಯಸ್ಸು ದೊಡ್ಡದಲ್ಲ. ದೈಹಿಕ ಬಯಕೆಯೂ…
ಕೆ.ಆರ್.ಪೇಟೆ: ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ
November 18, 2021ಕೆ.ಆರ್.ಪೇಟೆ, ನ.17- ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರು ಹಾಗೂ ಆರೋಗ್ಯ ಸಿಬ್ಬಂ ದಿಯ ಮೇಲೆ ಮಂಗಳವಾರ ರಾತ್ರಿ ಮಾರ ಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆ ದಿದ್ದು, ಪರಾರಿಯಾಗುತ್ತಿದ್ದ ನಾಲ್ವರು ಆರೋಪಿ ಗಳನ್ನು ಸಿನಿಮೀಯ ರೀತಿ ಬೆನ್ನಟ್ಟಿ ಬಂಧಿಸು ವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪಟ್ಟಣದ ವಿವಿಧ ಬಡಾವಣೆಯ ನಿವಾಸಿ ಗಳಾದ ಪರಮೇಶ್(22), ಕೆ.ಆರ್.ವಿನೋದ್ (23), ಕೆ.ಎಸ್.ದರ್ಶನ್(21), ವಿಜಯ್ ಅಲಿ ಯಾಸ್ ಪ್ರೇಮ್(22) ಬಂಧಿತ ಆರೋಪಿಗಳು. ಘಟನೆಯ ವಿವರ: ಆರೋಪಿಗಳು ಮಂಗಳ ವಾರ ಮಧ್ಯರಾತ್ರಿ…