ಮೈಸೂರು: ಮೈಸೂರಿನ ಜೆಎಲ್ಬಿ ರಸ್ತೆಯಲ್ಲಿರುವ ಬಿಗ್ ಬಜಾರ್ ಮಾಲ್ನಲ್ಲಿ ಡಿ.21ರಿಂದ 2019ರ ಜನವರಿ 2ರವರೆಗೆ ಬಿಗ್ ಹಾಲಿಡೇ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಬಿಗ್ಬಜಾರ್ನಲ್ಲಿ ಇಂದು ಮಧ್ಯಾಹ್ನ ಸುದ್ದಿಗೋಷ್ಟಿಯನ್ನು ದ್ದೇಶಿಸಿ ಮಾತನಾಡಿದ ಮಾಲ್ನ ಸ್ಟೋರ್ ಮ್ಯಾನೇಜರ್ ಸಿ.ಎಂ.ರವಿಚಂದ್ರನ್, ಬಿಗ್ ಹಾಲಿಡೇ ವೇಳೆ ಬಿಗ್ ಬಜಾರ್ನಲ್ಲಿ 4000 ರೂ. ವರೆಗೆ ವಸ್ತುಗಳನ್ನು ಖರೀದಿಸಿದ ಗ್ರಾಹಕರು 1000 ರೂ.ಗಳ ವೋಚರ್ ಪಡೆಯುವ ಅವಕಾಶ ನೀಡಲಾಗಿದೆ ಎಂದರು. ಈವರೆಗೆ ವಿಶೇಷ ರಿಯಾಯಿತಿ ಮೂಲಕ ಮೆಗಾ ಮಾರಾಟ ಉತ್ಸವಗಳನ್ನು ಆಚರಿಸುತ್ತಿದ್ದ ಮಾಲ್ನಲ್ಲಿ ಇದೀಗ 4000…
ಡಿ.29ರಂದು ಜಿಲ್ಲಾಡಳಿತದಿಂದ ಕುವೆಂಪು ಜಯಂತಿ
December 23, 2018ಮೈಸೂರು: ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಡಿಸೆಂಬರ್ 29 ರಂದು ಕಲಾಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಆಯೋಜಿಸಲಾಗುತ್ತಿದೆ. ಜಿಲ್ಲಾಧಿ ಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾ ಯಿತು. ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ರಾಷ್ಟ್ರಕವಿ ಕುವೆಂಪು ಅವರ ಜೀವನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆಯನ್ನು ಯುವಜನತೆಗೆ ಮನದಟ್ಟು ಮಾಡುವ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಟಿ. ಯೋಗೇಶ ತಿಳಿಸಿದರು….
ಇಂದು ಸಂಪುಟ ಪುನರ್ರಚನೆ
December 22, 2018ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ತಮ್ಮ ಸಂಪುಟವನ್ನು ಪುನರ್ ರಚನೆ ಮಾಡಲಿದ್ದಾರೆ. ಸಮ್ಮಿಶ್ರ ಸರ್ಕಾರದ ಪಾಲು ದಾರ ಪಕ್ಷವಾದ ಕಾಂಗ್ರೆಸ್ ಹಾಲಿ ಸಂಪುಟದಲ್ಲಿನ ಇಬ್ಬರನ್ನು ಕೈಬಿಟ್ಟು ನಂತರ ತನ್ನ ಪಾಲಿನ 6 ಇಲ್ಲವೇ 8 ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ನಿರ್ಧರಿಸಿದ್ದು, ಇಂದು ಸಂಜೆ 5.30ಕ್ಕೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಿನ್ನೆ ದೆಹಲಿಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಹಾಗೂ ಪ್ರದೇಶ ಕಾಂಗ್ರೆಸ್…
ಮಹಜರ್ ವೇಳೆ ಅಂಬಿಕಾ ಹೈಡ್ರಾಮಾ
December 22, 2018ಹನೂರು: ಸುಳವಾಡಿ ಕಿಚ್ಗುತ್ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷ ಬೆರೆಸಿ 16 ಮಂದಿ ಸಾವಿಗೆ ಕಾರಣರಾದ ನಾಲ್ವರು ಆರೋಪಿಗಳನ್ನು ಪೊಲೀಸರು ಇಂದು ವಿವಿಧೆಡೆಗೆ ಕರೆದೊಯ್ದು, ಮಹಜರ್ ನಡೆಸಿದರು. ಪ್ರಮುಖ ಆರೋಪಿಯಾದ ಇಮ್ಮಡಿ ಮಹದೇವಸ್ವಾಮಿ ವಿಚಾರಣೆ ವೇಳೆಯಲ್ಲಿ ಮತ್ತು ಆತನ ಪ್ರೇಯಸಿ ಅಂಬಿಕಾ ತನ್ನ ಮನೆಯ ಮಹಜರ್ ವೇಳೆಯಲ್ಲಿ ಹೈ ಡ್ರಾಮಾ ನಡೆಸಿದರು. ಡಿವೈಎಸ್ಪಿ ಪುಟ್ಟಮಾದಯ್ಯ ನೇತೃತ್ವದ ತಂಡ ಇಂದು ಆರೋಪಿಗಳಾದ ಅಂಬಿಕಾ, ಅಕೆಯ ಪತಿ ಮಾದೇಶ ಮತ್ತು ದೊಡ್ಡಯ್ಯ ಅವರುಗಳನ್ನು ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಸುಳವಾಡಿಗೆ…
ಜನ ಹಿತಾಸಕ್ತಿಗಿಂತ ಪ್ರತಿಷ್ಠೆಗಳ ಮೇಲಾಟಕ್ಕೆ ವೇದಿಕೆಯಾದ ಬೆಳಗಾವಿ ಅಧಿವೇಶನಕ್ಕೆ ತೆರೆ
December 22, 2018ಬೆಳಗಾವಿ: ಜನರ ಸಮಸ್ಯೆಗಳ ಬಗ್ಗೆ ಚರ್ಚೆಗಿಂತ ಪ್ರತಿಷ್ಠೆಗಳ ಮೇಲಾಟಕ್ಕೆ ಮೀಸಲಾದ ಬೆಳಗಾವಿ ವಿಧಾನ ಮಂಡಲ ಚಳಿಗಾಲದ ಅಧಿವೇಶನಕ್ಕೆ ತೆರೆ ಬಿದ್ದಿದೆ. ಕೃಷಿ ಸಾಲ ಮನ್ನಾ ಕುರಿತಂತೆ ಮತ್ತೊಮ್ಮೆ ರಾಷ್ಟ್ರೀಕೃತ ಬ್ಯಾಂಕ್ಗಳ ಆಡ ಳಿತ ಮಂಡಳಿ ಜೊತೆ ಸಮಾಲೋಚನೆ ನಡೆಸುವ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೂ ಆಹ್ವಾನ ನೀಡುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ. ವಿಧಾನಮಂಡಲ ಅಧಿವೇಶನ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಅಧಿಕಾರಿಗಳು ನಿರಂತರವಾಗಿ ವಾಣಿಜ್ಯ ಬ್ಯಾಂಕ್ನ ಅಧಿಕಾರಿಗಳ…
ವಿಷ ಪ್ರಸಾದ ಪ್ರಕರಣ: ಮತ್ತೊಂದು ಸಾವು
December 22, 2018ಮೈಸೂರು: ಸುಳವಾಡಿ ಮಾರಮ್ಮ ದೇವಾಲಯದ ವಿಷ ಪ್ರಸಾದ ಸೇವನೆಯಿಂದ ತೀವ್ರ ಅಸ್ವಸ್ಥರಾಗಿ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಶುಕ್ರವಾರ ಅಸುನೀಗಿದ್ದು, ಪ್ರಕರಣ ದಲ್ಲಿ ಸಾವಿಗೀಡಾದವರ ಸಂಖ್ಯೆ 16ಕ್ಕೇರಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳವಾಡಿ ನಿವಾಸಿ ನಾಗೇಶ್ (45) ಇಂದು ಬೆಳಿಗ್ಗೆ ಚಿಕಿತ್ಸೆ ಪಲಕಾರಿ ಯಾಗದೆ ಕೊನೆಯುಸಿರೆಳೆದರು. ಆಡು ಮೇಯಿಸಲು ಡಿ.14ರಂದು ಸುಳವಾಡಿ ಕಿಚ್ಗುತ್ ಮಾರಮ್ಮ ದೇವಾಲಯದ ಬಳಿ ಹೋಗಿದ್ದ ನಾಗೇಶ್, ದೇವಾಲಯದಲ್ಲಿ ನೀಡಿದ ಪ್ರಸಾದ ಸೇವಿಸಿದ್ದರು. ವಿಷ ಪ್ರಸಾದ…
ನಾಳೆ ಹಿನಕಲ್ ಫ್ಲೈಓವರ್ ಉದ್ಘಾಟನೆ
December 22, 2018ಮೈಸೂರು: ಮೈಸೂ ರಿನ ಹಿನಕಲ್ ರಿಂಗ್ ರೋಡ್ ಜಂಕ್ಷನ್ ನಲ್ಲಿ ನಿರ್ಮಿಸಿರುವ ಫ್ಲೈಓವರ್(ಗ್ರೇಡ್ ಸಪರೇಟರ್) ಭಾನುವಾರ ಸಾರ್ವಜನಿಕರ ಬಳಕೆಗೆ ಸಮರ್ಪಣೆಯಾಗಲಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಭಾನುವಾರ ಮಧ್ಯಾಹ್ನ 1.30 ಗಂಟೆಗೆ ಫ್ಲೈಓವರ್ ಅನ್ನು ಉದ್ಘಾ ಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ಕೇಂದ್ರದ ನಗರಾಭಿವೃದ್ಧಿ ವಸತಿ ಮತ್ತು ಬಡತನ ನಿರ್ಮೂಲನಾ ಸಚಿವ ಹರಿದೀಪ್ ಸಿಂಗ್ ಪೂರಿ ಅವರು ಪಾಲ್ಗೊಳ್ಳುವರು. ಸಚಿವರಾದ ಯು.ಟಿ.ಖಾದರ್, ಹೆಚ್.ಡಿ.ರೇವಣ್ಣ, ಸಾ.ರಾ.ಮಹೇಶ, ಸಂಸದರಾದ ಪ್ರತಾಪ್ಸಿಂಹ, ಆರ್. ಧ್ರುವನಾರಾಯಣ,…
ನಾಳೆಯಿಂದ ಮೈಸೂರು-ಬೆಂಗಳೂರು ನಡುವೆ MEMU ರೈಲು ಸಂಚಾರ
December 22, 2018ಮೈಸೂರು: ಮೈಸೂರು-ಬೆಂಗಳೂರು ನಡುವೆ ವಾರಕ್ಕೆ ನಾಲ್ಕು ದಿನ MEMU (ಮೇನ್ ಲೈನ್ ಎಲೆಕ್ಟ್ರಿಕ್ ಮಲ್ಟಿ ಪಲ್ ಯೂನಿಟ್) ರೈಲು ಸಂಚಾರ ಡಿಸೆಂಬರ್ 23ರಿಂದ ಆರಂಭವಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮತ್ತು ಸಂಸದ ಪ್ರತಾಪ್ ಸಿಂಹ ಅವರು ಹಸಿರು ನಿಶಾನೆ ತೋರುವ ಮೂಲಕ ಭಾನುವಾರ ಮೈಸೂರು ರೈಲು ನಿಲ್ದಾಣದಲ್ಲಿ ಕೆಎಸ್ಆರ್ ಬೆಂಗಳೂರು ಮತ್ತು ಮೈಸೂರು ನಡುವೆ ಮೆಮು ರೈಲು ಸಂಚಾರ ಸೇವೆಗೆ ಚಾಲನೆ ನೀಡುವರು. ಮೇಯರ್ ಪುಷ್ಪಲತಾ ಜಗನ್ನಾಥ್, ಶಾಸಕರಾದ ಎಲ್.ನಾಗೇಂದ್ರ, ಮರಿತಿಬ್ಬೇಗೌಡ, ಸಂದೇಶ್ ನಾಗರಾಜ್, ಕೆ.ಟಿ.ಶ್ರೀಕಂಠೇಗೌಡ,…
ಮೈಸೂರು ತಾಪಂ ಇಓ ಛೇಂಬರ್ನಲ್ಲೇ ಜೆಡಿಎಸ್ ಸದಸ್ಯನ ಮೇಲೆ ಬಿಜೆಪಿ ಸದಸ್ಯನಿಂದ ಹಲ್ಲೆ
December 22, 2018ಮೈಸೂರು: ಮೈಸೂರು ತಾಲೂಕು ಪಂಚಾಯಿತಿಯ ಕಾರ್ಯ ನಿರ್ವಾಹಕ ಅಧಿಕಾರಿಯ ಛೇಂಬರ್ನಲ್ಲೇ ಮೈಸೂರು ತಾಪಂ ಜೆಡಿಎಸ್ ಸದಸ್ಯನ ಮೇಲೆ ಬಿಜೆಪಿ ಸದಸ್ಯ ಹೆಲ್ಮೆಟ್ ಹಾಗೂ ಕುರ್ಚಿಯಿಂದ ತೀವ್ರ ಹಲ್ಲೆ ನಡೆಸಿದ ಘಟನೆ ಗುರುವಾರ ನಡೆದಿದೆ. ತಾಪಂನ ಶ್ರೀರಾಂಪುರ ಕ್ಷೇತ್ರದ ಜೆಡಿಎಸ್ ಸದಸ್ಯ ಹನುಮಂತು ಹಲ್ಲೆಗೊಳ ಗಾದವರಾಗಿದ್ದು, ಇವರ ಮೇಲೆ ವಾಜ ಮಂಗಲ ಕ್ಷೇತ್ರದ ಬಿಜೆಪಿ ಸದಸ್ಯ ಮಂಜು ನಾಥ್ ಹಲ್ಲೆ ನಡೆಸಿದ್ದು, ಈ ಸಂಬಂಧ ತಾಪಂ ಕಾರ್ಯ ನಿರ್ವಾಹಕಾಧಿಕಾರಿ ಲಿಂಗ ರಾಜು ನಜರ್ಬಾದ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ…
ಮೈಸೂರು ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನಾ ರಾಜೀನಾಮೆ ನಿರ್ಧಾರ
December 22, 2018ಮೈಸೂರು: ಶುಕ್ರವಾರ ನಿಗದಿಯಾಗಿದ್ದ ಮೈಸೂರು ಜಿಲ್ಲಾ ಪಂಚಾ ಯಿತಿ ಸಾಮಾನ್ಯ ಸಭೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ರಾಜೀನಾಮೆ ನಿರ್ಧಾರ ದಿಂದ ಮುಂದೂಡಲ್ಪಟ್ಟಿತು. ಜಿಪಂ ಸಭಾಂಗಣದಲ್ಲಿ ಸಾಮಾನ್ಯ ಸಭೆಗೆ ಕಾಂಗ್ರೆಸ್ ಸದಸ್ಯರು ಬಂದರೆ, ಮತ್ತೊಂದೆಡೆ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ರಾಜೀನಾಮೆ ಪ್ರಕ್ರಿಯೆಯಲ್ಲಿ ಭಾಗಿಯಾದರು. ನಿಯಮದಂತೆ ಅಧ್ಯಕ್ಷೆ ನಯಿಮಾ ಸುಲ್ತಾನ ನಜೀರ್ ಅಹಮದ್ ಅವರಿಗೆ ಜಿ.ನಟ ರಾಜು ರಾಜೀನಾಮೆ ಪತ್ರ ಸಲ್ಲಿಸಿದರು. ಅದೇ ರೀತಿ ಅಧ್ಯಕ್ಷೆ ನಯಿಮಾ ಸುಲ್ತಾನ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ…