ಗುಂಡ್ಲುಪೇಟೆ, ಜು.11(ಸೋಮ್.ಜಿ)- ಎದುರಿನಿಂದ ಅಡ್ಡಲಾಗಿ ಬಂದ ಜೀಪ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ಕಳೆದುಕೊಂಡ ಕೆಎಸ್ಆರ್ಟಿಸಿ ಬಸ್ ರಸ್ತೆ ಬದಿಯ ಹಳ್ಳಕ್ಕೆ ಜಾರಿರುವ ಘಟನೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಭಾನುವಾರ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಚಾಲಕನ ಸಮಯಪ್ರಜ್ಞೆಯಿಂದ ಬಸ್ ನಲ್ಲಿದ್ದ 40 ಪ್ರಯಾಣಿಕರು ಯಾವುದೇ ತೊಂದರೆಯಾಗದೇ ಪಾರಾಗಿದ್ದಾರೆ. ಬಸ್ ಎಡಭಾಗಕ್ಕೆ ಸಂಪೂರ್ಣವಾಗಿ ವಾಲಿದ್ದರಿಂದ ಪ್ರಯಾಣಿಕರನ್ನು ಬಸ್ನ ತುರ್ತು ನಿರ್ಗಮನ ಬಾಗಿಲಿನ ಮೂಲಕ ಸುರಕ್ಷಿತವಾಗಿ ಕೆಳಗಿಳಿಸ ಲಾಯಿತು. ಉಳಿದಂತೆ ಘಟನೆಯಿಂದ ಕಳ್ಳೀಪುರ…
ಮೂಗೂರಿನಲ್ಲಿ ಸಮಗ್ರ ಕೃಷಿ ಅಭಿಯಾನ ರಥಕ್ಕೆ ಚಾಲನೆ
July 11, 2021ಮೂಗೂರು, ಜು. 10 (ಎಂಬಿಆರ್)- ರೈತರು ಕೃಷಿ ಇಲಾಖೆ ಮಾಹಿತಿ ಆಧಾರಿತ ಚಟುವಟಿಕೆಯಲ್ಲಿ ತೊಡಗುವ ಮೂಲಕ ತಮ್ಮ ಆರ್ಥಿಕತೆಯಲ್ಲಿ ಸುಧಾರಣೆ ಕಂಡುಕೊಳ್ಳಬೇಕಿದೆ ಎಂದು ಶಾಸಕ ಎಂ.ಅಶ್ವಿನ್ಕುಮಾರ್ ಹೇಳಿದರು. ಮೂಗೂರಲ್ಲಿ ಸಮಗ್ರ ಕೃಷಿ ಅಭಿಯಾನ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಕೃಷಿ ಉತ್ಪನ್ನದ ಜೊತೆಗೆ ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಇದರ ನಡುವೆಯೂ ಹಲವು ಸವಾಲುಗಳನ್ನು ಎದುರಿಸಿ ಕೃಷಿಯಲ್ಲಿ ತೊಡಗುವುದು ಅನಿವಾರ್ಯವಾಗಿದೆ. ಸರ್ಕಾರದ ಕೃಷಿ ಯೋಜನೆ ಸೌಲಭ್ಯ ಸದ್ಬಳಕೆ ಮಾಡಿಕೊಂಡು ತಮ್ಮ ಆರ್ಥಿಕ ಬಲವನ್ನು ವೃದ್ಧಿಸಿಕೊಳ್ಳು ವಂತೆ…
ಸಮಗ್ರ ಕೃಷಿ ಮಾಹಿತಿ ಪ್ರಚಾರ ರಥಕ್ಕೆ ಚಾಲನೆ
July 11, 2021ಹಿರೀಕ್ಯಾತನಹಳ್ಳಿ, ಜು.10(ಸ್ವಾಮಿಗೌಡ)- ಸರ್ಕಾರ ಕೃಷಿ ಅಭಿಯಾನದ ಮೂಲಕ ರೈತರಿಗೆ ವಿವಿಧ ಇಲಾಖೆಗಳಿಂದÀ ಸಿಗುವ ಸವÀಲತ್ತು ಹಾಗೂ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು ಮುಂದಾಗಿದೆ ಎಂದು ತಾಪಂ ನಿಕಟಪೂರ್ವ ಸದಸ್ಯ ಗಣಪತಿ ಇಂದೂಲ್ಕರ್ ತಿಳಿಸಿದರು. ಇಲ್ಲಿನ ಗಾವಡಗೆರೆಯಲ್ಲಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಸಮಗ್ರ ಕೃಷಿ ಮಾಹಿತಿ ಒಳಗೊಂಡ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಲಾಖೆ ನೀಡುವ ಸವಲತ್ತುಗಳ ಸದುಪಯೋಗ ಪಡೆದು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ…
ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿ ತಡೆಗೆ ಡಬಲ್ ಟೆಂಟಕಲ್ಸ್ ಅಳವಡಿಕೆ
July 11, 2021ಹನಗೋಡು, ಜು.10 (ಮಹೇಶ್)- ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿ ದಾಳಿ ನಿಯಂತ್ರಿಸಲು ಡಬಲ್ ಟೆಂಟಕಲ್ಸ್ (ಗ್ರಹಣಾಂಶವುಳ್ಳ) ಸೋಲಾರ್ ತಂತಿಬೇಲಿ ಅಳವಡಿಸಲಾಗುತ್ತಿದ್ದು, ಆನೆ ಇನ್ನಿತರ ವನ್ಯಜೀವಿಗಳ ನುಸುಳುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲಾಗುತ್ತಿದೆ. 843 ಚದರ ಕಿಮೀ ವಿಸ್ತಾರವಾಗಿರುವ ನಾಗರಹೊಳೆ ರಕ್ಷಿತಾರಣ್ಯದ ಸುತ್ತಮುತ್ತಲ ಗ್ರಾಮಗಳಲ್ಲಿ ಆನೆ, ಚಿರತೆ, ಹುಲಿ, ಮುಂತಾದ ಪ್ರಾಣಿಗಳು ಆಹಾರವನ್ನರಸಿ ನಾಡಿನೊಳಗೆ ದಾಳಿ ಮಾಡುತ್ತಿವೆÉ. ಅರಣ್ಯ ಇಲಾಖೆ ಹಲವಾರು ಪ್ರಯೋಗಗಳು, ಯೋಜನೆ ಗಳನ್ನು ಜಾರಿಗೊಳಿಸಿ ವನ್ಯಜೀವಿ ದಾಳಿ ನಿಯಂತ್ರಿಸಲು ಯತ್ನಿಸುತ್ತಿದ್ದು, ಆನೆ ಕಂದಕ ನಿರ್ಮಾಣ, ಸೋಲಾರ್…
ಮತದಾರರಿಗೆ ನುಡಿದಂತೆ ನಡೆದಿದ್ದೇನೆ: ಶಾಸಕ ಬಿ.ಹರ್ಷವರ್ಧನ್
July 11, 2021ನಂಜನಗೂಡು, ಜು.10- ನುಗು ಏತ ನೀರಾವರಿ ಯೋಜನೆ ಜಾರಿಗೊಳಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಮತದಾರರಿಗೆ ವಾಗ್ದಾನ ಕೊಟ್ಟಿದ್ದೆ. ಇದೀಗ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು ನುಡಿದಂತೆ ನಡೆಯುವ ಮೂಲಕ ರೈತರ 3 ದಶಕಗಳ ಕನಸನ್ನು ಸಾಕಾರಗೊಳಿಸಿದ್ದೇನೆ ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು. ನಗರದ ಶ್ರೀಕಂಠೇಶ್ವರಸ್ವಾಮಿ ದೇವಾ ಲಯದಲ್ಲಿ ಶನಿವಾರ ನುಗು ಯೋಜನೆ ಜಾರಿಯಾದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು. ಕಳೆದ 3 ವರ್ಷದ ಹಿಂದೆ ಚುನಾವಣಾ ಪ್ರಚಾರಕ್ಕೆ ಹೋದಾಗ…
ಶಿಕ್ಷಕರು ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸಿ
July 11, 2021ಮೈಸೂರು, ಜು.10 (ವೈಡಿಎಸ್)- ಬದುಕಿನಲ್ಲಿ ನಿಜವಾದ ಸಂಪತ್ತೆಂದರೆ ಆರೋಗ್ಯ. ಅದರಲ್ಲೂ ಕೊರೊನಾ ಸಂದರ್ಭದ ಸಂಕಷ್ಟಗಳನ್ನು ಎದುರಿಸಿ ನಿಲ್ಲು ವುದು ದೊಡ್ಡ ಸವಾಲು. ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಕರ್ತವ್ಯ ನಿರ್ವ ಹಿಸುತ್ತಿರುವ ಶಿಕ್ಷಕರು ಆರೋಗ್ಯದತ್ತ ಹೆಚ್ಚು ಕಾಳಜಿ ವಹಿಸಬೇಕೆಂದು ಜಿಲ್ಲಾ ನೌಕರರ ಸಂಘದ ನಿರ್ದೇಶಕ ಟಿ.ಸತೀಶ್ ಜವರೇಗೌಡ ಸಲಹೆ ನೀಡಿದರು. ಮೈಸೂರು ತಾಲೂಕಿನ ಮೆಲ್ಲಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ಶಿಕ್ಷಕಿ ವಿ.ಕಮಲಮ್ಮ ಅವರನ್ನು ಸನ್ಮಾನಿಸಿ ಮಾತನಾಡಿದ ಸತೀಶ್, ಶಿಕ್ಷಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ…
ಕೆಆರ್ಎಸ್ ಸುತ್ತ ಸ್ಫೋಟಕ ಬಳಕೆ ನಿಷೇಧಿsಸಿ
July 11, 2021ಮೈಸೂರು, ಜು.10- ಕೃಷ್ಣರಾಜ ಸಾಗರ (ಕೆಆರ್ಎಸ್) ಅಣೆಕಟ್ಟೆ ಸುತ್ತ ಮುತ್ತ ಕಲ್ಲು ಗಣಿಗಾರಿಕೆಗಾಗಿ ಸ್ಫೋಟಕ ವಸ್ತುಗಳ ಬಳಕೆಯನ್ನು ನಿಷೇಧಿಸುವಂತೆ ಮೈಸೂರು ಇಂಜಿನಿಯರುಗಳ ಸಂಸ್ಥೆ, ಎರಡು ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಕರ್ನಾಟಕ ರಾಜ್ಯ ಭೂಕಂಪ ಮಾಪನ ಸಂಸ್ಥೆ ವತಿಯಿಂದ ಅಧ್ಯಯನ ನಡೆಸಿ, 2018 ರಲ್ಲಿ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ರುವ ವರದಿಯಲ್ಲಿರುವ ಪ್ರಮುಖ ಅಂಶ ಗಳನ್ನು ಉಲ್ಲೇಖಿಸಿ, ದೊಡ್ಡ ಪ್ರಮಾಣದ ಸ್ಫೋಟಕಗಳಿಂದ ಕೆಆರ್ಎಸ್ ಅಣೆಕಟ್ಟೆ ಬಿರುಕಾಗುವುದು ಖಚಿತ ಎಂದು ಅಭಿಪ್ರಾಯಿ ಸುವುದರ ಜೊತೆಗೆ ಸಂಸ್ಥೆಯ…
ಅಗತ್ಯ ಬಿದ್ದರೆ ಪೊಲೀಸ್ ಬಲ ಬಳಸಿ ಕೋವಿಡ್ ಕೇರ್ ಸೆಂಟರ್ಗೆ ಸ್ಥಳಾಂತರಿಸಿ
July 10, 2021ಮೈಸೂರು, ಜು.9(ಆರ್ಕೆಬಿ)- ಮೈಸೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕಿತರಾಗಿ ಹೋಂ ಐಸೊಲೇಷನ್ನಲ್ಲಿ (ಮನೆಯಲ್ಲೇ ಪ್ರತ್ಯೇಕವಾಗಿ) ಇರುವವರನ್ನು ಕೋವಿಡ್ ಕೇಂದ್ರ ಅಥವಾ ತಾಲೂಕು ಆಸ್ಪತ್ರೆ ಗಳಿಗೆ ಕಳುಹಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಇಂದಿಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿ ದರು. ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗ ಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ (ಜಲಜೀವನ್ ಮಿಷನ್), ಎಂ.ನರೇಗಾ, ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ವೇಳೆ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಪರಿಸ್ಥಿತಿ…
ನೆಲೆಗಾಗಿ ಕಾದಾಟ: ಹುಲಿ ಬಲಿ
July 10, 2021ಹೆಚ್.ಡಿ.ಕೋಟೆ, ಜು.9(ಎಂಟಿವೈ, ಮಂಜು)- ನೆಲೆ ಕಂಡುಕೊಳ್ಳಲು 2 ಹುಲಿಗಳ ನಡುವೆ ನಡೆದ ಭೀಕರ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 5 ವರ್ಷ ಗಂಡು ಹುಲಿಯನ್ನು ಸೆರೆ ಹಿಡಿದು ಚಿಕಿತ್ಸೆಗಾಗಿ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗದ ಗುಂಡ್ರೆ ವಲಯದ ನಾಯಳ್ಳ ಗಸ್ತಿನ ಹಾದಿಯಲ್ಲಿ ಸುತ್ತನಹಳ್ಳ ಸಮೀಪ ಹಿನ್ನೀರಿನ ಬಳಿ ಗಂಭೀರ ವಾಗಿ ಗಾಯಗೊಂಡಿದ್ದ ಹುಲಿ ಪತ್ತೆಯಾಗಿತ್ತು. ಎನ್ಟಿಸಿಎ (ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ) ಅನುಮತಿ ಪಡೆದು ಶುಕ್ರವಾರ ಬೆಳಗ್ಗೆ ಸುರಕ್ಷತಾ…
ಸರ್ಕಾರದ ಧನಸಹಾಯ ಪಡೆಯಲು ತೊಡಕು: ಗೃಹಕಾರ್ಮಿಕರ ಅಳಲು
July 10, 2021ಮೈಸೂರು, ಜು.9(ಎಂಟಿವೈ)- ಲಾಕ್ಡೌನ್ ವೇಳೆ ಸಂತ್ರಸ್ತರಾದವರಿಗೆ ಸರ್ಕಾರ ಘೋಷಿಸಿದ ಧನಸಹಾಯ ಪಡೆಯಲು ಗೃಹ ಕಾರ್ಮಿಕರ ಉದ್ಯೋಗ ದೃಢೀಕರಣ ಪತ್ರದಲ್ಲಿ ದಿಢೀರ್ ಬದಲಾ ವಣೆ ತಂದಿರುವುದನ್ನು ವಿರೋಧಿಸಿ ಮೈಸೂ ರಿನ ಕಾರ್ಮಿಕ ಇಲಾಖೆ ಮುಂಭಾಗ ಎಐಯುಟಿಯುಸಿ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟಿಸಿದ ಗೃಹ ಕಾರ್ಮಿಕರು, ಹಳೆಯ ಉದ್ಯೋಗ ದೃಢೀಕರಣ ಪತ್ರದ ನಮೂನೆ ಯನ್ನೇ ಪರಿಗಣಿಸುವಂತೆ ಆಗ್ರಹಿಸಿದರು. ಕುವೆಂಪು ನಗರದ ಅಕ್ಷಯ ಭಂಡಾರ್ ಬಳಿ ಇರುವ ಕಾರ್ಮಿಕ ಇಲಾಖೆ ಕಚೇರಿ ಮುಂದೆ ಶುಕ್ರವಾರ ಬೆಳಗ್ಗೆ ಪ್ರತಿಭಟನೆ ಆರಂಭಿಸಿದ ಗೃಹ ಕಾರ್ಮಿಕರು, ರಾಜ್ಯ…










