ಮೈಸೂರು, ಸೆ.21(ಆರ್ಕೆ)-ಮೈಸೂರಿನ ನಿವೇದಿತಾನಗರದಲ್ಲಿ ಭಾನುವಾರ ಸಂಜೆ ನಡೆದ ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಅವರ ಹತ್ಯೆ ಪ್ರಕರಣ ಸಂಬಂಧ ಪೊಲೀಸರಿಗೆ ಕೆಲ ಮಹತ್ವದ ಸುಳಿವು ಪತ್ತೆಯಾಗಿದೆ. ಇಬ್ಬರು ಪರಶಿವಮೂರ್ತಿ ಅವರ ಮನೆ ಒಳಗೆ ಹೋಗಿ, ಹೊರಬಂದಿ ರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಫುಟೇಜಸ್ ಸಹಾಯ ದಿಂದ ಕೊಲೆಗೆ ಸಂಬಂಧಿಸಿದ ಕೆಲ ಸುಳಿವು ಪತ್ತೆಯಾಗಿದ್ದು, ಕುವೆಂಪು ನಗರ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ತನಿಖೆಗಾಗಿ ಸರಸ್ವತಿಪುರಂ ಠಾಣೆ ಇನ್ಸ್ಪೆಕ್ಟರ್ ವಿಜಯಕುಮಾರ್ ನೇತೃತ್ವದಲ್ಲಿ ರಚಿಸಿರುವ ವಿಶೇಷ ತನಿಖಾ…
ಆರೋಗ್ಯ ಹಸ್ತ ಕಾರ್ಯಕ್ರಮದ ಮೂಲಕ ಕಾಂಗ್ರೆಸ್ ಜನರ ಹಿತ ಕಾಯುತ್ತಿದೆ
September 22, 2020ಮೈಸೂರು, ಸೆ. 21(ಎಂಟಿವೈ)- ಸಮು ದಾಯಕ್ಕೆ ಹಬ್ಬಿರುವ ಕೊರೊನಾ ಸೋಂಕು ಮತ್ತಷ್ಟು ವೇಗವಾಗಿ ಹರಡುತ್ತಿದ್ದು, ಸೋಂಕಿನ ಸರಪಳಿ ತಡೆಗಟ್ಟಲು ಸರ್ಕಾರ ಮಾಡಬೇಕಾದ ಕೆಲಸವನ್ನು ಕಾಂಗ್ರೆಸ್ ಪಕ್ಷ `ಆರೋಗ್ಯ ಹಸ್ತ’ ಜಾರಿಗೆ ತರುವ ಮೂಲಕ ಜನರ ಹಿತ ಕಾಯುತ್ತಿದೆ ಎಂದು ಮಾಜಿ ಸಂಸದ, ಆರೋಗ್ಯ ಹಸ್ತ ಕಾರ್ಯಕ್ರಮದ ರಾಜ್ಯ ಉಸ್ತುವಾರಿ ಆರ್.ದ್ರುವನಾರಾಯಣ್ ತಿಳಿಸಿದ್ದಾರೆ. ಮೈಸೂರಿನ ಅಗ್ರಹಾರ ಸಮೀಪದಲ್ಲಿ ಎಂ.ಜಿ. ರಸ್ತೆ ಬಳಿಯಿರುವ ಮದುವನ ಬಡಾ ವಣೆಯಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ನೇತೃತ್ವದಲ್ಲಿ ಸೋಮ ವಾರ ಆಯೋಜಿಸಿದ್ದ ಕೆ.ಆರ್.ವಿಧಾನ…
ಕಲಾವಿದರು ಬದುಕಿದ್ದಾಗಲೇ ಅವರ ಕುಟುಂಬಕ್ಕೆ ಸರ್ಕಾರ ನೆರವಾಗಬೇಕು
September 22, 2020ಮೈಸೂರು, ಸೆ.21(ಆರ್ಕೆಬಿ)- ಕಲಾವಿದರು ಬದುಕಿರು ವಾಗಲೇ ಸರ್ಕಾರ ಅವರ ಕುಟುಂಬಕ್ಕೆ ಏನಾದರೂ ಸಹಾಯ ಮಾಡಬೇಕು. ಹಿರಿಯ ಹಾಸ್ಯನಟ ಕೆ.ಎಂ.ರತ್ನಾಕರ್ ಅವರನ್ನು ಕನ್ನಡ ಚಿತ್ರರಂಗ ಕಳೆದುಕೊಂಡು ದಶಕ ಕಳೆದಿದ್ದರೂ ಸರ್ಕಾರ ಅವರನ್ನು ಕುರಿತು ಪುಸ್ತಕ ಪ್ರಕಟಿಸಿ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಿಲ್ಲ ಎಂದು ಸಾಹಿತಿ, ಅಂಕಣಕಾರ ಬನ್ನೂರು ಕೆ.ರಾಜು ಬೇಸರ ವ್ಯಕ್ತಪಡಿಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಸೋಮವಾರ ಹಾಸ್ಯನಟ ರತ್ನಾಕರ್ ಅಭಿಮಾನಿ ಬಳಗ ಏರ್ಪಡಿಸಿದ್ದ ರತ್ನಾಕರ್ ಅವರ 10ನೇ ವರ್ಷದ ನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾ ಡಿದರು….
ಭಾರತೀಯ ಸಾಂಸ್ಕøತಿಕ ವಿಕಾಸ ವೇದಿಕೆಯಿಂದ ಇಂದು ಕಾವೇರಿಗೆ ಬಾಗಿನ ಸಮರ್ಪಣೆ
September 22, 2020ಮೈಸೂರು,ಸೆ.21(ಆರ್ಕೆಬಿ)-ಮೈಸೂರಿನ ಭಾರತೀಯ ಸಾಂಸ್ಕøತಿಕ ವಿಕಾಸ ವೇದಿಕೆ, ಭೂಮಿಕಾ ಭಾವೈಕ್ಯ ಬಳಗದ ಸಂಯುಕ್ತ ಆಶ್ರಯದಲ್ಲಿ ಅಖಿಲ ಕರ್ನಾಟಕ ಶಿವಶರಣ ಮಾದಾರ ಚನ್ನಯ್ಯ ವಿಚಾರ ವೇದಿಕೆ, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಸ್ಯಾಂಡಲ್ವುಡ್ ಸೆಲೆಬ್ರಿಟಿಸ್ ಸಹಕಾರದಲ್ಲಿ ಸೆ.22ರಂದು ಮಧ್ಯಾಹ್ನ 12 ಗಂಟೆಗೆ ಕೃಷ್ಣರಾಜಸಾಗರದ ಬಲದಂಡೆ ನಾಲೆ ಬಳಿ ಕಾವೇರಿ ಮಾತೆಗೆ 7ನೇ ವರ್ಷದ ಬಾಗಿನ ಸಮರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ತಗಡೂರು ಗೌರಿಶಂಕರ್ ತಿಳಿಸಿದರು. ವ್ಯಾಸರಾಜಮಠದ ಶ್ರೀ ವಿದ್ಯಾಮನೋಹರತೀರ್ಥ ಸ್ವಾಮೀಜಿ, ಇಳೈ ಆಳ್ವಾರ್ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮೇಯರ್…
ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಆರಂಭ
September 22, 2020ಮೊದಲ ದಿನ ಗಣಿತ ಪರೀಕ್ಷೆಗೆ 5749 ವಿದ್ಯಾರ್ಥಿಗಳ ಪೈಕಿ 518 ಮಂದಿ ಗೈರು ಮೈಸೂರು,ಸೆ.21(ಆರ್ಕೆಬಿ)-ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಗಳು ಸೋಮವಾರ ದಿಂದ ಆರಂಭವಾಗಿದ್ದು, ಮೈಸೂರು ನಗರದ 15 ಪರೀಕ್ಷಾ ಕೇಂದ್ರಗಳು ಸೇರಿದಂತೆ ಜಿಲ್ಲೆಯ ಒಟ್ಟು 35 ಪರೀಕ್ಷಾ ಕೇಂದ್ರ ಗಳಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆ ಯಿತು. ಮೊದಲ ದಿನವಾದ ಇಂದು ನಡೆದ ಗಣಿತ ಪರೀಕ್ಷೆಗೆ ನೋಂದಾ ಯಿಸಿಕೊಂಡಿದ್ದ 5749 ಅಭ್ಯರ್ಥಿ ಗಳ ಪೈಕಿ 5231 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 518 ಮಂದಿ ಗೈರು ಹಾಜರಾಗಿದ್ದರು. ಎಲ್ಲಾ ವಿಷಯಗಳು ಸೇರಿದಂತೆ…
ಇಂದಿನಿಂದ ವಿಧಾನಮಂಡಲ ಅಧಿವೇಶನ
September 21, 2020ಬೆಂಗಳೂರು, ಸೆ.20- ಇತಿಹಾಸದಲ್ಲಿ ಮೊದಲ ಬಾರಿಗೆ ವಿಧಾನ ಮಂಡಲ ಅಧಿ ವೇಶನ ನಡೆಸಲು ಹೊಸ ಸವಾಲು ಎದು ರಾಗಿದೆ. ಕೊರೊನಾ ವೈರಸ್ ಆತಂಕದ ಮಧ್ಯೆ ಲೋಕಸಭಾ ಅಧಿವೇಶನ ನಡೆಯುತ್ತಿದೆ. ಇದೀಗ ನಾಳೆ (ಸೋಮವಾರ)ಯಿಂದ ಕರ್ನಾಟಕ ವಿಧಾನ ಮಂಡಲ ಅಧಿವೇಶನ ಆರಂಭವಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಮೊದಲ ಸಲ ಹೊಸ ಸವಾಲುಗಳು ಮೂರು ರಾಜಕೀಯ ಪಕ್ಷಗಳಿಗೆ ಎದುರಾ ಗಿವೆ. ಜೊತೆಗೆ ಕರ್ನಾಟಕ ವಿಧಾನಸಭೆ ಸಚಿ ವಾಲಯ ಹೊಸ ಮಾರ್ಗಸೂಚಿ ಹೊರಡಿ ಸಿದ್ದು, ಮುಖ್ಯಮಂತ್ರಿ, ಸಚಿವರು, ವಿಪಕ್ಷ ನಾಯಕರು, ಅಧಿಕಾರಿಗಳು ಹಾಗೂ…
ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಅಂಗೀಕಾರ
September 21, 2020ನವದೆಹಲಿ, ಸೆ.20- ಭಾರೀ ವಿರೋಧದ ನಡುವೆಯೇ ಕೃಷಿ ಮಸೂದೆಗಳಿಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತ ಘಟನೆಯನ್ನು ಭಾರತೀಯ ಕೃಷಿ ಇತಿಹಾಸದಲ್ಲಿ ಐತಿಹಾಸಿಕ ಕ್ಷಣ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಎರಡು ಪ್ರಮುಖ ಮಸೂದೆಗಳಿಗೆ ರಾಜ್ಯಸಭೆಯಲ್ಲಿ ಅಂಗೀಕಾರ ಸಿಕ್ಕ ನಂತರ ಭಾನುವಾರ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಕೃಷಿ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಕ್ಷಣವಾಗಿದೆ. ಸಂಸತ್ತಿ ನಲ್ಲಿ ಪ್ರಮುಖ ಮಸೂದೆಗಳು ಅಂಗೀಕಾರವಾಗಿದ್ದು, ಶ್ರಮ ಜೀವಿಗಳಾದ ರೈತರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಇನ್ನು, ಕೃಷಿ ಕ್ಷೇತ್ರದ ಸಂಪೂರ್ಣ ಬದಲಾವಣೆಯನ್ನು…
ಮೈಸೂರಿನ ಜೀವಧಾರ ಬ್ಲಡ್ ಬ್ಯಾಂಕ್ಗೆ ಪ್ಲಾಸ್ಮಾ ಸಂಗ್ರಹ ಮಾಡುವ ಹೈಟೆಕ್ ಯಂತ್ರ ಅಳವಡಿಕೆ
September 21, 2020ಮೈಸೂರು, ಸೆ.20(ಎಂಟಿವೈ)- ಕೊರೊನಾ ಸೋಂಕಿತರನ್ನು ಗುಣಪಡಿಸಲು ಸಂಜೀವಿನಿಯಾಗಿ ಮಾರ್ಪಟ್ಟಿರುವ ಗುಣಮುಖರಾದ ಸೋಂಕಿತರ ಪ್ಲಾಸ್ಮಾ ಸಂಗ್ರಹಕ್ಕೆ ಮೈಸೂರಿನ ಜೀವಧಾರ ಬ್ಲಡ್ ಬ್ಯಾಂಕ್ ಹೊಸದಾಗಿ `ಎಫೆರೆಸಿಸ್ ಸಿಂಗಲ್ ಡೋರ್ ಪ್ಲಾಸ್ಮಾ’ ಸಂಗ್ರಹ ಹೈಟೆಕ್ ಯಂತ್ರ ಖರೀದಿಸಿದ್ದು, ಇನ್ನೆರಡು ದಿನದಲ್ಲಿ ದೇಹದಿಂದ ನೇರವಾಗಿ ಪ್ಲಾಸ್ಮಾ ಸಂಗ್ರಹ ಕಾರ್ಯಾರಂಭಿಸಲಿದೆ. ಕೊರೊನಾ ಸೋಂಕಿತರು ಶೀಘ್ರ ಗುಣಮುಖರಾಗಲು ಪ್ಲಾಸ್ಮಾ ಥೆರಪಿ ಪರಿಣಾಮಕಾರಿ ಬಳಸಲಾಗುತ್ತಿದ್ದು, ಇದಕ್ಕಾಗಿ ಗುಣಮುಖರಾದ ಸೋಂಕಿತ ರಿಂದ ಪ್ಲಾಸ್ಮಾ ನೀಡುವಂತೆ ಎಲ್ಲೆಡೆ ಮೊರೆ ಇಡಲಾಗುತ್ತಿದೆ. ಇದರೊಂದಿಗೆ ಸರ್ಕಾರ ಪ್ಲಾಸ್ಮಾ ದಾನಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ಲಾಸ್ಮಾ…
ಮೈಸೂರಿನ ನಿವೇದಿತಾ ನಗರದಲ್ಲಿ ನಿವೃತ್ತ ಪ್ರಾಂಶುಪಾಲರ ಬರ್ಬರ ಹತ್ಯೆ
September 21, 2020ಮೈಸೂರು, ಸೆ.20-ನಿವೃತ್ತ ಪ್ರಾಂಶುಪಾಲರೊಬ್ಬ ರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂ ರಿನ ನಿವೇದಿತಾ ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ. ವಸತಿ ಪ್ರದೇಶದಲ್ಲಿ ದುಷ್ಕರ್ಮಿಗಳು ಮನೆಗೆ ನುಗ್ಗಿ ಹತ್ಯೆ ಮಾಡಿರುವ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಮೈಸೂರಿನ ಕುವೆಂಪುನಗರ ಸರ್ಕಾರಿ ಕಾಲೇಜು, ಚಳ್ಳಕೆರೆ ಮುಂತಾದೆಡೆ ಸೇವೆ ಸಲ್ಲಿಸಿ ಹಾಸನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶು ಪಾಲರಾಗಿ ನಿವೃತ್ತಿ ಹೊಂದಿದ ಪರಶಿವಮೂರ್ತಿ(67) ಹತ್ಯೆಗೀಡಾದವರಾಗಿದ್ದು, ಇವರು ನಿವೇದಿತಾನಗರ 4ನೇ ಅಡ್ಡ ರಸ್ತೆಯ ನಿವಾಸದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ವಿವರ: ಭಾನುವಾರ ರಾತ್ರಿ…
ಮಡಿಕೇರಿ-ಭಾಗಮಂಡಲ ಸಂಪರ್ಕ ಕಡಿತ
September 21, 2020ಮಡಿಕೇರಿ, ಸೆ.20- ಕೊಡಗು ಜಿಲ್ಲೆಯಾದ್ಯಂತ ಭಾನು ವಾರವೂ ಮಳೆಯ ರಭಸ ಮುಂದುವರಿದಿದ್ದು, ಪ್ರಾಕೃತಿಕ ವಿಕೋಪದಿಂದ ಸಹಜ ಸ್ಥಿತಿಯತ್ತ ಮರಳುತ್ತಿರುವ ಕಾವೇರಿ ತವರಲ್ಲಿ ಮತ್ತೆ ಆತಂಕ ಮನೆ ಮಾಡಿದೆ. ಭಾನುವಾರ ಜಿಲ್ಲೆಯಾದ್ಯಂತ ಗಾಳಿ ಸಹಿತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ವಾದ ಬಗ್ಗೆ ವರದಿಯಾಗಿದೆ. ಮಡಿಕೇರಿಯ ಇಂದಿರಾ ನಗರದಲ್ಲಿ ಅಲ್ಪ ಪ್ರಮಾಣದ ಭೂ ಕುಸಿತವಾದ ಘಟನೆಯೂ ನಡೆದಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ಚಾಮುಂ ಡೇಶ್ವರಿ ನಗರದಲ್ಲಿ ಭಾರೀ ಗಾಳಿಗೆ ಕೆಲವು ಮನೆಗಳ ಹೆಂಚುಗಳು ಹಾರಿ…









